ಕತ್ತಲೆ ಓಡಿಸುವ ಬದಲು ಗೊಂದಲ ಹುಟ್ಟಿಸಿದ ಹೊಸ ಬೆಳಕು!


Team Udayavani, Dec 11, 2017, 11:43 AM IST

11-20.jpg

ಎಲ್‌ಇಡಿ ಬಲ್ಬ್ಗಳ ಬೆಲೆ ದುಬಾರಿಯಾಗಿದ್ದರಿಂದ ಜನ ಅದರಿಂದ ದೂರ ಉಳಿದಿದ್ದರು. ಸರ್ಕಾರದ ಯೋಜನೆಯ ಕಾರಣ ಅದು ಸಹಾಯಧನದ ಮೂಲಕ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದುದು ಜನರನ್ನು ಆಕರ್ಷಿಸಿತು.  ಇಂದು ಬ್ರಾಂಡೆಡ್‌ ಕಂಪನಿಗಳ ಬೆಲೆ ಜರ್ರನೆ ಇಳಿದಿದೆ. 9 ವ್ಯಾಟ್‌ನ ಪ್ರೋತ್ಸಾಹ ನಾಲ್ಕು ಬಲ್ಬ್ ಬೆಲೆ 500 ರೂ. ಅಥವಾ ಅದಕ್ಕಿಂತ ಕಡಿಮೆ. ಎವರೆಡಿ, ಸಿಸ್ಕಾ ಇನ್ನೂ ಕಡಿಮೆಗೇ ಲಭ್ಯ. 

ಕೇಂದ್ರ ಸರ್ಕಾರದ “ಉನ್ನತ್‌ ಜ್ಯೋತಿ ಬೈ ಅಫ‌ಡ‚ìಬಲ್‌ ಎಲ್‌ಇಡೀಸ್‌ ಫಾರ್‌ ಆಲ್‌’ ಎಂಬ ಯೋಜನೆ; ಹೃಸ್ವವಾಗಿ ಹೇಳುವುದಾದರೆ “ಉಜಾಲಾ’ ಮೂಡಿಸಿದ ಭರವಸೆಯ ಬೆಳಕು,  ಅದು ರಿಯಾಯ್ತಿ ದರದಲ್ಲಿ ನೀಡಿದ 9 ವ್ಯಾಟ್‌ ಎಲ್‌ಇಡಿ ಬಲ್ಬ್ ಬೆಳಕಿಗಿಂತ ಹೆಚ್ಚು. ಮೂರು ವರ್ಷಗಳ ಗ್ಯಾರಂಟಿ ಸಹಿತ 80 ರೂ.ಗೆ ಒಂದು ವರ್ಷದ ಹಿಂದೆ ಈ ಬಲ್ಬ್ ಹಂಚಿದಾಗ ಜನ ಮುಗಿಬಿದ್ದು ತೆಗೆದುಕೊಂಡರು. ಮಾರುಕಟ್ಟೆಯಲ್ಲಿ 200, 300 ರೂ. ಎಂಆರ್‌ಪಿ ಇರುವಾಗ ಅದೇ ಬಲ್ಬ್ ಕೇವಲ 80 ರೂಪಾಯಿಗೆ ಸಿಗುವುದಷ್ಟೇ ಅಲ್ಲ, ಅದಕ್ಕೆ, ಮೂರು ವರ್ಷದ ಗ್ಯಾರಂಟಿ ಇರುವಾಗ  ಏಕೆ ಬಿಡಬೇಕು? ಈ ಸೌಲಭ್ಯ, ಬಂಪರ್‌ ಎಂದುಕೊಂಡರು.

ಬೆಳಕಿನ ಮಾತಿನ ಹಿಂದೆ ಕುರುಡು!
ಅಂಕಿಅಂಶಗಳ ಪ್ರಕಾರ, ಈವರೆಗೆ 270 ಮಿಲಿಯನ್‌ ಎಲ್‌ಇಡಿ ಬಲ್ಬ್ಗಳು ಮಾರಾಟವಾಗಿವೆ. ಇದರಿಂದ ಜನರಿಗೆ 14,017 ಕೋಟಿ ರೂ. ಉಳಿತಾಯವಾಗಿದೆ ಎಂಬುದು ಕೇಂದ್ರದ ಅಧಿಕೃತ www.eeslindia.org ವೆಬ್‌ ಮಾಹಿತಿ. ಇದೊಂದು ಕುರುಡು ಲೆಕ್ಕ. ಇಂದು ಮತ್ತೂಮ್ಮೆ ಎಲ್ಲೆಡೆ ಎಲ್‌ಇಡಿ ಬಲ್ಬ್ಗಳನ್ನು ತರಿಸುವ ಕೌಂಟರ್‌ಗಳು ಆಯಾ ಭಾಗದ ವಿದ್ಯುತ್‌ ವಿತರಣಾ ಕಂಪನಿಗಳಲ್ಲಿ ಜಾರಿಗೊಂಡಿದೆ. ಈಗ ಬಲ್ಬ್ಗೆ 80 ಅಲ್ಲ, 60 ರೂ. ಮಾತ್ರ. ಆದರೂ ಅಲ್ಲಿ ಕಾಣಿಸುವ ಜನಸಂದಣಿ ಬಲ್ಬ್ ಖರೀದಿಗೆ ಬರುತ್ತಿಲ್ಲ. ಈ ಹಿಂದೆ ಖರೀದಿಸಿ ತಿಂಗಳೊಪ್ಪತ್ತಿನಲ್ಲಿ ಹಾಳಾದ ಬಲ್ಬ್ಗಳನ್ನು ಬದಲಿಸಿಕೊಳ್ಳಲು ಎಡತಾಕುತ್ತಿದ್ದಾರೆ! 

ಖರೀದಿಸಿದ ಬಲ್ಬ್ ಬಳಕೆಗೇ ಬಂದಿಲ್ಲ ಎಂತಾದರೆ ಸರ್ಕಾರದ ವಿದ್ಯುತ್‌ ಬಿಲ್‌ ಉಳಿದಿದೆ, ವಾರ್ಷಿಕ 7015 ಮೆಗಾವ್ಯಾಟ್‌ ಲೋಡ್‌ ಕುಸಿದಿದೆ, 28 ಮಿಲಿಯನ್‌ ಟನ್‌ ಸಿಓಟು ಕಡಿಮೆಯಾಗಿದೆ ಎಂಬ ಲೆಕ್ಕಗಳೆಲ್ಲ ಬೋಗಸ್‌ ಆಗುತ್ತವೆ. ಇಂತಹ ಚೆಂದದ ಲೆಕ್ಕಗಳನ್ನು ಪ್ರತಿ 15 ಸೆಕೆಂಡ್‌ಗೊಮ್ಮೆ ಅಪ್‌ಡೇಟ್‌ ಮಾಡಿ ಕೊಡುವ ಈ ವೆಬ್‌ಲಿಂಕ್‌ನಲ್ಲಿ [http://www.ujala.gov.in/] ನೋಡಿ ಆನಂದಿಸಿ, ನಂಬಬೇಡಿ!

2015ರ ಜನವರಿ 5ರಂದು ಉದ್ಘಾಟನೆಗೊಂಡ ಕೇಂದ್ರದ ಯೋಜನೆ ಬಗ್ಗೆ ತಕರಾರೆತ್ತುವುದು ತಪ್ಪು. ಅದನ್ನು ಉಜಾಲಾ ಹೆಸರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೂಪಿಸಿದ್ದರೂ ಸರಿ, ಹೊಸ ಬೆಳಕು ಶೀರ್ಷಿಕೆಯಡಿ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದ್ದರೂ ಸೈ. ಇದು ವಿಶ್ವದ ಅತಿ ದೊಡ್ಡ ಗ್ರಾಹಕ ಸಂಪರ್ಕ ಯೋಜನೆ ಎಂಬುದಂತೂ ಖಚಿತ. ದೇಶದಲ್ಲಿಯೇ ಎಲ್‌ಇಡಿ ಬಲ್ಬ್ಗಳ ತಯಾರಿಕೆಯ ದೊಡ್ಡ ದೊಡ್ಡ ಉದ್ಯಮ ಸೃಷ್ಟಿಯಾಗಲು ಈ ಯೋಜನೆ ಕಾರಣವಾಗಿದೆ. ಈ ಯೋಜನೆಯಿಂದಾಗಿಯೇ ಅಜಮಾಸು 60 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತದ ಎಲ್‌ಇಡಿ ಮಾರುಕಟ್ಟೆ ಶೇ. 0.1ರಿಂದ ಶೇ. 12ರಷ್ಟು ವೃದ್ಧಿಸಿದೆ. ಜನರಲ್ಲಿ ಟಂಗಸ್ಟನ್‌ ಬಲ್ಬ್, ಸಿಎಫ್ಎಲ್‌ಗ‌ಳ ಮನಸ್ಥಿತಿಯಿಂದ ಎಲ್‌ಇಡಿ ಕ್ರಾಂತಿಯತ್ತ ಮುಖ ಮಾಡುವಂತೆ ಮಾಡಲಾಗಿದೆ.

ಕಡಿಮೆ ಬೆಲೆಯ  ಆಕರ್ಷಣೆ!
ಎಲ್‌ಇಡಿ ಬಲ್ಬ್ಗಳ ಬೆಲೆ ದುಬಾರಿಯಾಗಿದ್ದರಿಂದ ಜನ ಅದರಿಂದ ದೂರ ಉಳಿದಿದ್ದರು. ಸರ್ಕಾರದ ಯೋಜನೆಯ ಕಾರಣ ಅದು ಸಹಾಯಧನದ ಮೂಲಕ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದುದು ಜನರನ್ನು ಆಕರ್ಷಿಸಿತು. ಜಿಯೋ ಮೊಬೈಲ್‌ ಡಾಟಾವನ್ನು ಕಡಿಮೆ ದರಕ್ಕೆ ತರಿಸಲಾರಂಭಿಸಿದ ಮೇಲೆ ಅದು ಅಷ್ಟು ದುಬಾರಿಯಲ್ಲ, ಮೊಬೈಲ್‌ ಕಂಪನಿಗಳು ಪರಮಾವಧಿ ಲಾಭ ಗಿಟ್ಟಿಸಿಕೊಳ್ಳಲಷ್ಟೇ ಈ ದುಬಾರಿ ದರ ಇರಿಸಿದ್ದರು ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ. ಅವರೂ ಜಿಯೋದೊಂದಿಗೆ ಪೈಪೋಟಿಗೆ ಇಳಿದು ಜಿಬಿ ಡಾಟಾಗಳ ಬೆಲೆಯನ್ನು ಪಾತಾಳಕ್ಕೆ ಇಳಿಸಿದ್ದಾರೆ. ಈ ಉದಾಹರಣೆಯನ್ನು ದಟ್ಟವಾಗಿ ನೆನಪಿಸುವಂತೆ ಈ ಎಲ್‌ಇಡಿ ಬಲ್ಬ್ಗಳ ಬೆಲೆ ಪ್ರಸಂಗವೂ ನಡೆದಿದೆ. ಇಂದು ಬ್ರಾಂಡೆಡ್‌ ಕಂಪನಿಗಳ ಬೆಲೆ ಜರ್ರನೆ ಇಳಿದಿದೆ. 9 ವ್ಯಾಟ್‌ನ ಪ್ರೋತ್ಸಾಹ ನಾಲ್ಕು ಬಲ್ಬ್ ಬೆಲೆ 500 ರೂ. ಅಥವಾ ಅದಕ್ಕಿಂತ ಕಡಿಮೆ. ಎವರೆಡಿ, ಸಿಸ್ಕಾ ಇನ್ನೂ ಕಡಿಮೆಗೇ ಲಭ್ಯ. ಒಂದು ಬಲ್ಬ್ಗೆ 90-100 ರೂ. ಸರಾಸರಿ ಬೆಲೆ ಎನ್ನುವವರು ಹೊಸ ಬೆಳಕು ಯೋಜನೆಯಡಿ ಮಾರಾಟವಾಗುವ ಬಲ್ಬ್ಗೆ ಸರ್ಕಾರ ಶೇ. 50ರ ಸಬ್ಸಿಡಿ ನೀಡುತ್ತದೆ ಎಂಬುದನ್ನು ಮರೆಯಬಾರದು.

ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತು 50 ಪೈಸೆ ನಾಣ್ಯದಂತೆ ಅನಧಿಕೃತವಾಗಿ ರದ್ದಾಗಿದೆ! ಈ ಯೋಜನೆಯಡಿ ಮಾರಾಟವಾಗುತ್ತಿರುವ ಬಲ್ಬ್ಗಳ ಗುಣಮಟ್ಟ ಪ್ರಶ್ನಾರ್ಹವಾಗಿರುವುದರಿಂದಲೇ ದೊಡ್ಡ ಸಂಖ್ಯೆಯ ಬಲ್ಬ್ಗಳು ಹಾಳಾಗಿ ಕಂಪನಿಗಳಿಗೆ ವಾಪಸಾಗುತ್ತಿರುವುದು. ಅದೇ ಹೊರ ಮಾರುಕಟ್ಟೆಯಲ್ಲಿ ಸಿಗುವ ಬಲ್ಬ್ ವರ್ಷ, ಎರಡು ವರ್ಷ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿವೆ. ಅಂದರೆ ಸರ್ಕಾರಿ ಯೋಜನೆಯಡಿ ಮಾರಾಟವಾಗುವ ಬಲ್ಬ್ಗಳ ಗುಣಮಟ್ಟವನ್ನು ಕೆಳದರ್ಜೆಗೆ ಇಳಿಸಿರುವ ಅನುಮಾನ ಸತ್ಯವಾಗುತ್ತದೆ. ಇಇಎಸ್‌ಎಲ್‌ ವೆಬ್‌ ಗ್ರಾಹಕ ಬದಲಿಸಿಕೊಂಡ ಬಲ್ಬ್ಗಳ ಲೆಕ್ಕ ಮಾತ್ರ ಕೊಡುವುದಿಲ್ಲ!

ತಪ್ಪು ಮಾಡಿದ್ದು ಗ್ಯಾರಂಟಿ!
ಸರ್ಕಾರ ಮೂರು ವರ್ಷಗಳ ಗ್ಯಾರಂಟಿಗಿಂತ ಒಂದು ವರ್ಷದ ಗ್ಯಾರಂಟಿ ಇಟ್ಟು ಅತ್ಯುತ್ತಮ ಗುಣಮಟ್ಟದ ಬಲ್ಬ್ಗಳನ್ನು ಮಾರಾಟ ಮಾಡುವಂತೆ ಏಜೆನ್ಸಿಗಳನ್ನು ನೇಮಿಸಿಕೊಳ್ಳಬೇಕಿತ್ತು. 100ರಲ್ಲಿ ಕೇವಲ ಒಂದೆರಡು ಸಮಸ್ಯೆ ಎಂತಾದರೆ ಜನ ಎಲ್‌ಇಡಿ ಮೇಲೆ ಭರವಸೆ ಹೊಂದುತ್ತಿದ್ದರು. ಈಗ ಸರ್ಕಾರವೂ ವಿಶ್ವಾಸ ಕಳೆದುಕೊಂಡಿದೆ, ಬಲ್ಬ್ ಕೂಡ. ಇದೇ ಯೋಜನೆಯಡಿಯ ಟ್ಯೂಬ್‌ಲೈಟ್‌, ಫ್ಯಾನ್‌ ಯೋಜನೆ ಕೂಡ ಗ್ರಾಹಕ ಪರ ಎನ್ನುವಂತಿಲ್ಲ. ಈಗೇನೋ ಬಲ್ಬ್ಗಳ ಮಾರಾಟಕ್ಕೆ ಹೊಸ ಏಜೆನ್ಸಿ ನಿಗದಿಗೊಂಡಿದೆ. ಅವು ಎಸ್ಕಾಂಗಳ ಆವರಣದಲ್ಲಿ ಕೌಂಟರ್‌ ತೆರೆದಿವೆ. ಒಂದು ರಿಯಾಲಿಟಿ ಚೆಕ್‌ ಅನ್ವಯ, ಎಲ್ಲೆಲ್ಲಿ ಈ ಕೌಂಟರ್‌ ಮತ್ತೆ ತೆರೆಯಲಾಗಿದೆಯೋ ಅಲ್ಲೆಲ್ಲ ಹಾಳಾದ ಬಲ್ಬ್ಗಳನ್ನು ವಾಪಾಸು ಪಡೆಯಲಾಗಿದೆ. ಕೇಂದ್ರದ ಗುರಿ 2019ರ ಮಾರ್ಚ್‌ ಅಂತ್ಯಕ್ಕೆ ದೇಶದ 100 ನಗರಗಳಲ್ಲಿ ಒಟ್ಟು 770 ಮಿಲಿಯನ್‌ ಎಲ್‌ಇಡಿ ಬಲ್ಬ್ಗಳನ್ನು ಮಾರುವುದಾಗಿದೆ. ಒಮ್ಮೆ ಈ ಏಜೆನ್ಸಿಗಳು 2019ರಲ್ಲಿ ಮುಚ್ಚಿಬಿಟ್ಟರೆ ಆಗ ಗ್ಯಾರಂಟಿ ಜವಾಬ್ದಾರಿಯನ್ನು ನಿರ್ವಹಿಸುವವರಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಬದಲಿಸುವಾಗಿನ ನಿಯಮಗಳ ಬಗ್ಗೆಯೂ ಸ್ಪಷ್ಟ ಚೌಕಟ್ಟು ಇಲ್ಲ. ಹಲವೆಡೆ ಕೇವಲ ಬಲ್ಬ್ ತಂದದ್ದನ್ನೇ ಸಾಕ್ಷಎಂದು ಪರಿಗಣಿಸಿ ಬದಲಿಸಿ ಕೊಡಲಾಗಿದೆ. ಹಲವು ಸಂದರ್ಭಗಳಲ್ಲಿ ಈ ಹಿಂದೆ ಖರೀದಿ ಸಮಯದ ಬಿಲ್‌ ಕೇಳಲಾಗಿದೆ. ಈ ಬಿಲ್‌ನಲ್ಲಿ ಬಲ್ಬ್ ಬದಲಿಸಿದ ದಿನಾಂಕ, ಬಲ್ಬ್ ಸಂಖ್ಯೆಯನ್ನು ನಮೂದಿಸಿದ್ದನ್ನು ಕಾಣುತ್ತೇವೆ. ಇಇಎಸ್‌ಎಲ್‌ಗೆ ಟ್ವೀಟ್‌ ಮೂಲಕ ದೂರು ಸಲ್ಲಿಸಿದ ಗ್ರಾಹಕರೊಬ್ಬರಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ, ಹಾಳಾದ ಬಲ್ಬ್ ಬದಲಾಯಿಸಿಕೊಳ್ಳುವಾಗ ಬಿಲ್‌ ಕಡ್ಡಾಯವಲ್ಲ. ಬಲ್ಬ್ ಡಿಇಎಲ್‌ಪಿ ಅಥವಾ ಉಜಾಲಾ ಬ್ರಾಂಡ್‌ ಆಗಿರಬೇಕು ಎಂದು ಹೇಳಿದೆ.

ಸಧ್ಯಕ್ಕಂತೂ ದೂರು ದಾಖಲಿಸಲು ವಿವಿಧ ಅವಕಾಶಗಳನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ದೂರವಾಣಿ ಸಂಖ್ಯೆ 155275 ಅಥವಾ 1800 180 3580 ಮೂಲಕ ದೂರು ದಾಖಲಿಸಬಹುದು. mailto:[email protected]  ಗೆ ಮೈಲ್‌ ಮಾಡಿ ದೂರು ಸಲ್ಲಿಸಬಹುದು. ಇನ್ನೂ ಸುಲಭದ ಹಾದಿ ಎಂದರೆ www.support.eeslindia.orgಗೆ ತೆರಳಿ ನೇರವಾಗಿ, ಸುಲಭವಾಗಿ ದೂರು ಫಾರಂ ತುಂಬಬಹುದು. 

ಸದ್ಯ ಹಾಳಾದ ಬಲ್ಬ್ ಬದಲಿಸಿ ಕೊಡುವ ಪ್ರಕ್ರಿಯೆ ನಡೆದಿರುವುದರಿಂದ ಬಹುತೇಕ ಗ್ರಾಹಕರು ಸಂತುಷ್ಟರಾಗಿದ್ದಾರೆ. ಅದಕ್ಕಾಗಿ ಮಾಡಿದ ತಿರುಗಾಟ, ಸುಸ್ತುಗಳನ್ನು ಕೂಡ ಅವರು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈಗ ಬರೀ 220 ರೂ.ಗೆ ಎಲ್‌ಇಡಿ ಟ್ಯೂಬ್‌ಲೈಟ್‌ ಲಭ್ಯವಾಗುತ್ತಿರುವುದರಿಂದ ಅದರ ಬೆನ್ನಿಗೆ ಬಿದ್ದಿದ್ದಾರೆ. 375, 400 ರೂ. ಕನಿಷ್ಠ ಬೆಲೆಯ ಟ್ಯೂಬ್‌ಲೈಟ್‌ಗೆ ಇಲ್ಲಿನ ದರ ಲಾಭದಾಯಕವೇ. ಗ್ಯಾರಂಟಿಯ ಅಂಶವನ್ನು ಮನಸ್ಸಿನಿಂದ ಹೊರಹಾಕಿ ಖರೀದಿಸಬಹುದು!

ಮಾ.ವೆಂ.ಸ.ಪ್ರಸಾದ್‌,  ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.