ರೊಕ್ಕ ಅದಾ, ಆ ಪ್ರೀತಿ ವಿಶ್ವಾಸ ಇಲ್ರೀ


Team Udayavani, Aug 20, 2019, 5:00 AM IST

w-7

ಅವ್ರು ಹೋಗಿದ್ದೇ ತಡ, ನಮ್ಮವ್ವ ನನಗ್‌ ದರದರ ಅಂತ ರೂಮನ್ಯಾಗ್‌ ಎಳ್ಕೊಂಡ್‌ ಹೋಗಿ ಬಡದೆ ಬಿಟ್ಲು. ನೀ ಟೈಮ್‌ ನೋಡಲ್ಲ, ಏನು ನೋಡಲ್ಲ, ಬಂದೋರ್‌, ಹೋದೋರ ಎದ್ರುಗೆಲ್ಲ ನೀ ಹಿಂಗ ಮಾಡ್ತೀ… ಅನ್ನುತ್ತ ನಾಕ್‌ ಎಟ್‌ ಭಾರಿಸಿದ್ಲು, ಆಮ್ಯಾಲ ನಮ್ಮ ಬಾಜು ಮನಿ ಕಲಾವತಿ ಕಾಕು ಬಂದು ಬಿಡ್ಲಿ, ಅವರ ಮನೀಗ್‌ ಕರ್ಕೊಂಡ್‌ ಹೋಗಿ ಸಮಾಧಾನ ಮಾಡಿದ್ರು. ಆದ್ರ ಅಮ್ಮ ಹಾಗಿಲ್ರೀ.

ಆಗ ನಾವ್‌ ಸಣ್ಣೋರಿದ್ವಿ. ನಮಗೂ ಅವಾಗ್‌ ಅಷ್ಟೊಂದ್‌ ತಿಳೀತಿರಲಿಲ್ಲ, ನೋಡಿದ್ದೆಲ್ಲ ಬೇಡತಿದ್ವಿ. ನಮ್ಮಮ್ಮ ಭಾಳ್‌ ಕಂಜೂಸ್‌. ರೊಕ್ಕಾ ಕೇಳಿದ್ರ ಕೊಡ್ತೇ ಇರ್ಲಿಲ್ಲ. ಹಾಗಂತ ನಾವೇನು ಶ್ರೀಮಂತರಲ್ರೀ. ಬಡತನ ಜಾಸ್ತಿನೇ ಇತ್ತು. ಅದಕ್ಕೇ ನಮ್ಮಮ್ಮ ಕಂಜೂಸ್‌ ಮಾಡೋಳು. ಒಂದಿನ ಹಿಂಗೇ ಬ್ಯಾಸಗಿ ಟೈಮ್‌. ಹೊರಾಗ್‌ ಭಾಳ್‌ ಬಿಸಿಲು, ಮನ್ಯಾಗೆ ಇದ್ದೆ. ನಮ್ಮವ್ವನು ಮನ್ಯಾಗೆ ಇದ್ಲು, ಆವತ್ತ ಮನಿಗಿ ನಮ್ಮವ್ವುನ ಚಿಕ್ಕವ್ವ ಮತ್ತ ಕಾಕಾ ಬಂದಿದ್ರು. ಅವ್ರು ಬಂದಾರಂತ ಹೇಳಿ ನಮ್ಮವ್ವ ಅವಲಕ್ಕಿ ಮತ್ತ ಚಹಾ ಮಾಡಿದ್ಲು, ಅವ್ರು ತಿಂದ್ರು, ನಾನೂ ತಿಂದೆ. ಹಂಗಾ ಮಾತು ಕತೆ ಆಡ್ಕೊಂತ ಕೂತ್ರು. ಅಲ್ಲಿಮಟ್ಟ ಸಂಜಿ ಆಗಿತ್ತು, ಸಂಜಿಮುಂದ ಅಲ್ಲೇ ಮನಿಮುಂದ್‌ ಬಾರಿಹಣ್ಣ ಮಾರಕ್ಕಿ ಬಂದ್ಲು, ನಾ ನೋಡಿದ ಕುಡ್ಲೆ ಜಿದ್ದ ಮಾಡಿದೆ. ನಂಗು ಬೇಕು ಅಂತ. ನಮ್ಮವ್ವ “ಬ್ಯಾಡ ಈಗಷ್ಟ ಅವಲಕ್ಕಿ ತಿಂದಿ ಅಲ್ಲ ಅಂದ್ಲು. ಆದರೂ ನಾ ಬಿಡ್ಲಿಲ್ಲ. ನನಗ್‌ ಬೇಕೇ ಬೇಕು ಅಂತ ಮತ್ತಿಷ್ಟು ಜಿದ್ದ ಮಾಡ್ದೆ, ಮನಿಗ್‌ ಬಂದೋರು ಪಾಪ ಹುಡುಗ ಜಿದ್ದ ಮಾಡ್ಲಿಕತ್ತಾನಂತ ಹೇಳಿ 2ರುಪಾಯಿ ಕೊಟ್ಟು, ಬಾರಿಹಣ್ಣು ತಗೋ ಅಂದ್ರು. ನಾನು ಅದಾ ಖುಷ್ಯಾಗ್‌ ಮೊದ್ಲು ಒಲ್ಲೇ ಅಂತ ಅಂದೆ. ಆದರೂ ಅವ್ರು ಒತ್ತಾಯ ಮಾಡಿ, ತಗೋ ಅಪ್ಪೀ ಅಂತ ಅವ್ರೇ ಹೊರಾಗ ಬಂದು ಬಾರಿಹಣ್ಣು ಇಸ್ಕೊಟ್ರಾ.

ನಾ ತಿಂದೆ, ಅವ್ರು ಹೋಗಿದ್ದೇ ತಡ, ನಮ್ಮವ್ವ ನನಗ್‌ ದರದರ ಅಂತ ರೂಮನ್ಯಾಗ್‌ ಎಳ್ಕೊಂಡ್‌ ಹೋಗಿ ಬಡದೆ ಬಿಟ್ಲು. ನೀ ಟೈಮ್‌ ನೋಡಲ್ಲ, ಏನು ನೋಡಲ್ಲ, ಬಂದೋರ್‌, ಹೋದೋರ ಎದ್ರುಗೆಲ್ಲ ನೀ ಹಿಂಗ ಮಾಡ್ತೀ… ಅನ್ನುತ್ತ ನಾಕ್‌ ಎಟ್‌ ಭಾರಿಸಿದ್ಲು, ಆಮ್ಯಾಲ ನಮ್ಮ ಬಾಜು ಮನಿ ಕಲಾವತಿ ಕಾಕು ಬಂದು ಬಿಡ್ಸಿ, ಅವರ ಮನೀಗ್‌ ಕರ್ಕೊಂಡ್‌ ಹೋಗಿ ಸಮಾಧಾನ ಮಾಡಿದ್ರು.

ಈಗ ದೊಡ್ಡವನಾಗೀನಿ. ಅದೆಲ್ಲ, ನೆನಸ್ಕೊಂಡ್ರೆ ಈಗ್ಲೂ ಭಯ ಆಗ್ತದೆ. ಬಾರಿಹಣ್ಣ ತಿನ್ಬೇಕಾದ್ರ, ನಮ್ಮವ್ವ ನನಗ ಬೇಕಂತೆನ ಹೊಡೀತಿರಲಿಲ್ಲ. ಅವಾಗೆಲ್ಲ ನಮಗ್‌ ಭಾಳ್‌ ಬಡತನ, ಆದರೂ ನಮ್ಮವ್ವ ಹೊಡಿಯೋದೇನೋ ಹೊಡಿತಿದ್ಲು. ಆಮ್ಯಾಲ ಅಕಿನೂ ಭಾಯಿ ಕಟ್ಟಿಗ್‌ ಹೋಗಿ ಅಳ್ಕೊಂತ ಕೂಡ್ತಿದ್ಲು. ಈಗ ದುಡೀತೀನಿ. ಆದರೂ ಅಕಿನ ಬಿಟ್ಟು ತಿನ್ಬೇಕಲ್ಲ ಅಂತ ತಿನ್ನೋದೇ ಬಿಡ್ತೀನಿ. ಸಣ್ಣವನಿದ್ದಾಗ ರೊಕ್ಕ ಇರ್ತಿರಿರಲಿಲ್ಲ. ಪ್ರೀತಿ ವಿಶ್ವಾಸ ಎಲ್ಲಾ ಇತ್ತು. ಈಗ ಭಾಳಷ್ಟು ರೊಕ್ಕ ಅದಾ. ಆದ್ರ ಆ ಪ್ರೀತಿ ವಿಶ್ವಾಸ ಇಲ್ಲ.

-ಸಂಗಮೇಶ ಸಜ್ಜನ ಕಲಬುರ್ಗಿ

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.