ರಾಗಧನದ ಶ್ರಾವಣದ ಸಂಗೀತ ಸಂಜೆ


Team Udayavani, Sep 6, 2019, 4:55 AM IST

B-14

ಉಡುಪಿಯ ರಾಗಧನ ಸಂಸ್ಥೆಯು ಆ.17ರಂದು ನೂತನ ರವೀಂದ್ರ ಮಂಟಪದಲ್ಲಿ ಒಂದು ಸಂಗೀತ ಕಛೇರಿಯನ್ನು ಆಯೋಜಿಸಿತ್ತು. ಶಾವ್ರಣ ಈ ಸಂಗೀತವನ್ನು ನಡೆಸಿಕೊಟ್ಟವರು ಗಿರಿಜಾ ಶಂಕರ್‌ ಚೆನ್ನೈ.

ಹದವಾದ ಧ್ವನಿ ಸೌಕರ್ಯವನ್ನು ಹೊಂದಿರುವ ಈ ಗಾಯಕರು ಆ ದಿನ ದೋಷರಹಿತವಾದ ಮತ್ತು ಸರಳವಾದ ಸೌಖ್ಯ ಸಂಗೀತವನ್ನು ನೀಡಿದರು.ಅಟತಾಳ ಭೈರವಿ ವರ್ಣದೊಂದಿಗೆ ಶುರುವಾದ ಹಾಡುಗಾರಿಕೆಯಲ್ಲಿ ಧೇನುಕ ( ತೆಲಿಯತೇರು) ಸೌರಾಷ್ಟ್ರ (ಶರಣು ಸಿದ್ಧಿ ವಿನಾಯಕ), ಧನ್ಯಾಸಿ (ಸಂಗೀತ ಜ್ಞಾನಮು) ರವಿಚಂದ್ರಿಕ (ಮಾಕೇಲರ ) ರಾಗಗಳ ಕೃತಿಗಳು ಸೊಗಸಾಗಿ ಮೂಡಿ ಬಂದವು. ಲಲಿತ ( ಹಿರಣ್ಮಯೀಂ) ಮತ್ತು ಪೂರ್ವಿ ಕಲ್ಯಾಣಿ ( ಸಾಟಿಲೇನಿ) ರಾಗಗಳು ಪ್ರಧಾನವಾಗಿದ್ದವು. ಈ ರಾಗಗಳನ್ನು ಅಚ್ಚುಕಟ್ಟಾಗಿ ವಿಸ್ತರಿಸಿದ ಗಾಯಕರು ಎರಡೂ ಕೃತಿಗಳನ್ನು ಸೂಕ್ತವಾದ ನೆರ್‌ವಲ್‌ ಮತ್ತು ಸ್ವರವಿನಿಕೆಗಳಿಂದ ಪೋಷಿಸಿದರು. ಮುಂದೆ ರಾಗಂ-ತಾನಂ- ಪಲ್ಲವಿಗಾಗಿ ಕೀರವಾಣಿಯನ್ನು ಆಯ್ದುಕೊಂಡು ಶ್ರೀ ರಾಮ ಪ್ರಿಯಂ ಶ್ರೀನಿವಾಸಂ ಭಜೇ/ ಹಂ… ಶ್ರೀ ವತ್ಸ ನಾಮ ಧೇಯಂ… ಎಂಬ ಪಲ್ಲವಿಯನ್ನು, ಖಂಡ ತ್ರಿಪುಟ ತಾಳದಲ್ಲಿ ಕ್ರಮಬದ್ಧವಾಗಿ ನಿರೂಪಿಸಿ, ಸ್ವರ ಕಲ್ಪನೆಗಳನ್ನು ರಾಗ ಮೂಲಿಕೆಯಲ್ಲಿ ನೀಡಿದರು.

ವಯಲಿನ್‌ ಕಲಾವಿದ ವೈಭವ್‌ ರಮಣಿ, ಲಲಿತ ರಾಗದ ಶರಣಾಗತ – ಶೋಕ ಭಾವಗಳನ್ನು , ಪೂರ್ವಿ ಕಲ್ಯಾಣಿಯ ಗಾಂಭೀರ್ಯವನ್ನು ಅಂತೆಯೇ ಕೀರವಾಣಿಯ ಘನ ಮತ್ತು ಮೃದು ಮಗ್ಗುಲುಗಳನ್ನು ತನ್ನದೇ ಆದ ವಿನ್ಯಾಸ ವೈವಿಧ್ಯಗಳಿಂದ ನುಡಿಸಿದರು.

ಹದವರಿತು ಮೃದಂಗ ನುಡಿಸಿದ ಸುನಾದ ಕೃಷ್ಣ ಅಮ್ಮೆ ತನಿ ಆವರ್ತಗಳಲ್ಲಿ ನಿರ್ಮಿಸಿದ ಭಿನ್ನ ಲಯಗಣಿತದ ಗೋಪುರಗಳು ಪ್ರಶಂಸೆಗೆ ಪಾತ್ರವಾದವು. ಒಂದು ಶ್ಲೋಕವನ್ನು ಅನುಸರಿಸಿದ ಹಂಸಾನಂದಿ (ಮಾಧವ ಮಾಯಾ) ಪ್ರಸ್ತುತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.