ನೀ ಬಲು ದೊಡ್ಡ ಮಾಯಾವಿ


Team Udayavani, Nov 5, 2019, 3:45 AM IST

zz-9

ಇನ್ನೇನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗುವೆ ಎನ್ನುವ ಆಸೆಯೂ ತುದಿಗಾಲಿನಲ್ಲಿತ್ತು. ನನ್ನ ಬದುಕಿಗೆ ನೀ ಜೊತೆಗಾರನಾಗುವೆ ಅನ್ನೋ ಕನಸು ನನ್ನ ಕಣ್ಣ ತುಂಬ. ತಾಯಿಯ ಪ್ರೀತಿಯ ನಿನ್ನ ಅಮ್ಮನಲ್ಲಿ ಕಂಡೆ. ಆದರೆ ವಿಧಿಯು ನನ್ನ ಮುಂದೆ ತಿರುಗಿ ನಿಂತಿತ್ತು ಎಂದು ನನಗೆ ಅರಿವಿಗೇ ಬರಲೇ ಇಲ್ಲ.

ನನ್ನದು ರಂಗುರಂಗಿನ ಬದುಕು. ಕಣ್ಣ ತುಂಬಾ ಸಾವಿರ ಕನಸು, ತಾಳ್ಮೆಯೇ ನನಗಿರುವ ಬಹುದೊಡ್ಡ ಆಸ್ತಿ. ಜೀವನದ ಪ್ರತಿ ಹೆಜ್ಜೆಯಲ್ಲಿ ನಾನು ಒಂಟಿ. ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾದವಳು. ಬಂಧುಗಳ ಆಸರೆಯೂ ಸಿಗಲಿಲ್ಲ. ಆದರೂ, ಅದು ಹೇಗೋ ಜೀವನದ ಹಾದಿ ಸಾಗುತ್ತಿತ್ತು. ಅಂಥ ಸಂದರ್ಭದಲ್ಲೇ ಒಂದೇ ಸಮನೆ ಸುರಿಯುವ ಮಳೆಯಂತೆ ನನ್ನ ಬದುಕಿನ ಅಂಗಳಕ್ಕೆ ನೀ ಲಗ್ಗೆ ಇಟ್ಟೆ. ಹಿಡಿ ಪ್ರೀತಿಗಾಗಿ ದಿನವೂ ಹಂಬಲಿಸಿದ್ದವಳಿಗೆ ನೀ ಕೈ ಚಾಚಿದಾಗ ಒಲ್ಲೆ ಎನ್ನುವ ಮನಸ್ಸು ಬರಲಿಲ್ಲ.

ಬದುಕಿನ ದಾರಿಯಲ್ಲಿ ಒಂಟಿಯಾಗಿ ಸಾಗುತ್ತಿದ್ದ ನನಗೆ ಒಂದು ಜೀವದ ಅವಶ್ಯಕತೆ ಇತ್ತು. ನೀ ಸಿಕ್ಕಾಗ ನನಗೆ ಇಷ್ಟು ವರ್ಷದ ಕಾಳಜಿ, ನಂಬಿಕೆ, ಸ್ನೇಹ, ಪ್ರೀತಿಯನ್ನು ನಿನ್ನಲ್ಲಾದರೂ ಕಾಣಬಹುದು ಎಂಬ ಹೆಬ್ಬಯಕೆ. ಒಂದಲ್ಲ, ಎರಡಲ್ಲ ಸುಮಾರು ಆರು ವರ್ಷಗಳು ಜೊತೆಯಾಗಿ ಸಾಗಿದೆವು.

ಇನ್ನೇನು ಮದುವೆ ಎಂಬ ಬಂಧನದಲ್ಲಿ ಬಂಧಿಯಾಗುವೆ ಎನ್ನುವ ಆಸೆಯೂ ತುದಿಗಾಲಿನಲ್ಲಿತ್ತು. ನನ್ನ ಬದುಕಿಗೆ ನೀ ಜೊತೆಗಾರನಾಗುವೆ ಅನ್ನೋ ಕನಸು ನನ್ನ ಕಣ್ಣ ತುಂಬ. ತಾಯಿಯ ಪ್ರೀತಿಯ ನಿನ್ನ ಅಮ್ಮನಲ್ಲಿ ಕಂಡೆ. ಆದರೆ ವಿಧಿಯು ನನ್ನ ಮುಂದೆ ತಿರುಗಿ ನಿಂತಿತ್ತು ಎಂದು ನನಗೆ ಅರಿವಿಗೇ ಬರಲೇ ಇಲ್ಲ. ಬದುಕಿನಲ್ಲಿ ಎಲ್ಲರೂ ಸಿಕ್ಕರು ಎಂದುಕೊಳ್ಳುವಷ್ಟರಲ್ಲಿ ನೀನು ನಿನ್ನವರು ನನಗರಿವಿಲ್ಲದೇನೇ ದೂರವಾಗಲು ತುದಿಗಾಲಲ್ಲಿ ನಿಂತಿದ್ದಿರಿ. ಕಾಲ ಕಳೆದ ಹಾಗೆ ನಾನು ನಿನ್ನ ಮನೆಯವರಿಗೆ ಬೇಡವಾದೆ ಅಲ್ವಾ?

ನನ್ನ ಬದುಕಿನಲ್ಲಿ ಸಂಬಂಧದ ಕೊರತೆ ಇಂಚಿಂಚು ಕಾಡಿದ್ದನ್ನು ಬಿಟ್ಟರೆ, ದುಡ್ಡಿಗೇನೂ ಕೊರತೆ ಇಲ್ಲವಾಗಿತ್ತು. ಕೈ ತುಂಬ ಸಂಬಳ ಸಿಗುವ ಕೆಲಸ. ಆದರೆ, ಬದುಕಲ್ಲಿ ಹಣವೇ ಎಲ್ಲವೂ ಅಲ್ಲವಲ್ಲ; ಹಣಕ್ಕಾಗಿ ನಾನು ಆಸೆ ಪಟ್ಟವಳೂ ಅಲ್ಲವಲ್ಲ… ನಾನು ಬಯಸಿದ್ದು ಪ್ರೀತಿ ಮತ್ತು ವಾತ್ಸಲ್ಯ, ಪ್ರೀತಿ ಮತ್ತು ಬಾಂಧವ್ಯ. ಪ್ರೀತಿ ಮತ್ತು ಪರಿಣಯ. ಆದರೆ, ನನಗೆ ಅದು ಸಿಗಲೇ ಇಲ್ಲ.

ಇವತ್ತಿಗೂ ನಿನ್ನ ಪ್ರೀತಿಯ ಸೋನೆ ಮಳೆ ಮತ್ತೆ ಬೀಳಬಹುದೆಂಬ ನಿರೀಕ್ಷೆ ಎನಗೆ.
ನನ್ನ ಕನಸಿನ ಮಹಾಪೂರ ಒಡೆದು ಚೂರಾಗಿದೆ, ಜೋಡಿಸುವ ಮನಸ್ಸು ನನಗೆ ಇಲ್ಲ. ನೀ ಬಂದರೆ ಮಾತ್ರ, ಬಾಳಿನ ಈ ರೈಲು ಸುಲಭವಾಗಿ ಸಾಗಬಹುದು. ಇಲ್ಲದಿದ್ದರೆ, ಒಂಟಿ ಹೆಜ್ಜೆಯಿಟ್ಟು ಯಾರ ಹಂಗಿಲ್ಲದೇ ಸಾಗುವಳು ನಾನು…

ಸಾಯಿನಂದಾ ಚಿಟ್ಪಾಡಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.