ಒಟ್ಟಿಗೇ ಬಹುಮಾನ ಸ್ವೀಕರಿಸೋಣ ಬಾರೋ…


Team Udayavani, Nov 5, 2019, 3:48 AM IST

zz-10

ನೀನು ಬರೆದ ಒಂದು ಚುಕ್ಕಿಯು ಕೂಡ ನನಗೆ ವೇದವಾಕ್ಯದಂತೆ.ಆ ಮೌನದಲ್ಲೇ ಏನೋ ಒಂದು ಮಾತಿದೆಯೆಂದು ನಾನರಿಯುವೆ. ಮೌನಂ ಸಮ್ಮತಿ ಲಕ್ಷಣಂ ಎಂದು ಹಿರಿಯರೇ ಹೇಳಿರುವರಲ್ಲ? ನೀ ಬರೆದ ಒಂದು ಅಕ್ಷರವೂ ನನ್ನ ಪಾಲಿಗೆ ಉಪನಿಷತ್ತಿನಂತೆ ಕಣೋ. ಅಷ್ಟೇ ಅಲ್ಲ; ಮೂರು ಸಾಲುಗಳ ನೀ ಬರೆದ ಕಾವ್ಯ ತ್ರಿಪದಿಯಂತೆಯೂ, ಐದು ಸಾಲುಗಳು ಶರಣರ ವಚನಗಳಂತೆ. ಇನ್ನು ಚೌಪದಿ,ಷಟ³ದಿ,ಹೀಗೆ ಸಾಗುತ್ತಲೇ ಹೋಗುವುದು.

ನೀನು ನನಗಾಗಿ ಎರಡು ಸಾಲು ಬರೆದರೆ ಅದೇ ಸಾಕೆನಗೆ. ನೀನು ಬರೆವ ಸಾಲುಗಳೇ ನನ್ನ ಪಾಲಿಗೆ ಸುಭಾಷಿತವೂ, ನುಡಿಮುತ್ತು. ಅಮೃತ ವಚನದ ವಾಚನದಂತೆ ದಿನಾಲೂ ಒಂದು ಪತ್ರ ತೆರೆದು ಓದುವುದನ್ನು ನಾನು ಹವ್ಯಾಸವೆನ್ನಲೋ, ಹುಚ್ಚು ಎನ್ನಲೋ, ಅಭ್ಯಾಸವೆನ್ನಲೋ ತಿಳಿಯದು. ಅದಕ್ಕೆ ಏನು ಹೆಸರಿಡಲಿ ಗೆಳೆಯ?

ನೀ ಬರೆದ ಪತ್ರಗಳ ಸಂಗ್ರಹವೇ ನನಗೊಂದು ಗ್ರಂಥ ಭಂಡಾರ. ಪ್ರೀತಿ ದೇವತೆಯ ಮುಂದೆ ಆ ಗ್ರಂಥವಿಟ್ಟು ಪೂಜಿಸುವ ಸೌಭಾಗ್ಯವತಿ ನಾನು. ಮಾಡದ ಪೂಜೆ, ವ್ರತ, ಉಪವಾಸ, ಸಂಕಷ್ಟಿಗಳಿಲ್ಲ. ಆದರೆ ದೇವರು ಮಹಾ ತಪಸ್ಸಿನ ನಂತರ ನೀಡುವ ವರದಂತೆ ನೀ ಒಲಿಯಲು ಬಹಳ ಸಮಯವೇ ಬೇಕೇನೋ ಎಂಬ ಶಂಕೆ ಎನಗೆ.

ಇಷ್ಟು ದಿನವಾದರೂ ನಿನ್ನ ಪತ್ರ ಕಾಣದೇ ಇರುವುದು ಯಾಕೋ ಬಿಡಿಸಲಾರದ ಒಗಟಾಗಿದೆ.ಆ ಒಗಟಿಗೆ ಉತ್ತರವ ಕಳುಹಿಸುವೆಯಾ?ಒಗಟು ಬಿಡಿಸಲು ರಸಪ್ರಶ್ನೆಯಲ್ಲಿ ನೀಡುವಂತೆ ನೀನು ಥಟ್‌ ಅಂತ ಮಾತಾಡಬೇಕೆಂದು ನಾ ಬಯಸುವೆ. ಕಾಲಾವಕಾಶ ಜಾಸ್ತಿ ತೆಗದುಕೊಳ್ಳದೇ ಈ ಪ್ರಶ್ನೆಗೆ ಬೇಗ ಉತ್ತರ ಹೇಳಿ ಬಹುಮಾನವನ್ನು ಜಂಟಿಯಾಗಿ ಸ್ವೀಕರಿಸೋಣ ಬಾ ಗೆಳೆಯ.

ಇಂತಿ ನಿನ್ನ ಪ್ರೀತಿಯ,
ಉಲೂಚಿ

ಟಾಪ್ ನ್ಯೂಸ್

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.