ಈಗಲೂ ಮಾತಾಡ್ತೇವೆ. ಆದರೆ…


Team Udayavani, Nov 19, 2019, 5:33 AM IST

cc-11

ನಾನಿದ್ದೆ ನನ್ನ ಪಾಡಿಗೆ ಎಲ್ಲರಂತೆ; ಕನಸಿತ್ತು, ನಗುವಿತ್ತು, ಎಲ್ಲವೂ ಇತ್ತು. ಹತ್ತೂಂಬತ್ತು ವರ್ಷಗಳು ನಾನು ನಾನೇ ಆಗಿದ್ದೆ. ಇಂತಿದ್ದಾಗ, ಯಾವುದೇ ಸುಳಿವೇ ಕೊಡದೆ ನೀನೇಕೆ ಬಂದೆ? ಮೊದಲಿದ್ದ ನಗುವನ್ನು ಇಮ್ಮಡಿಗೊಳಿಸಲೋ? ಕನಸುಗಳಿಗೆ ಬಣ್ಣ ತುಂಬಲೋ ಅಥವಾ ನನ್ನನ್ನು ನಿನ್ನವಳಾಗಿಸಿಕೊಳ್ಳಲೋ? ನಿನ್ನ ಉದ್ದೇಶವೇನೇ ಇರಲಿ… ನೀ ನನ್ನ ಹೃದಯದೊಳ ಬಂದಾಯ್ತು, ಮುಂದೆ ಬರುವ ನನ್ನೆಲ್ಲಾ ನಾಳೆಗಳಿಗೆ ಮುನ್ನಡಿಯನ್ನೂ ಬರೆದಾಯ್ತು. ಇನ್ನೇನು ಬೇಕು ನನಗೆ? ನೀ ಜೊತೆಯಿದ್ದರೆ ಅಷ್ಟೇ ಸಾಕು.

ಮಟಮಟ ಮಧ್ಯಾಹ್ನದಲ್ಲಿ ಈ ರೀತಿಯೆಲ್ಲಾ ಬರೆಯೋವಾಗ ,ನನಗೂ breakup ಆಗಬಹುದು ಅನ್ನೋದನ್ನ ನಾನು ಊಹಿಸಿಯೂ ಇರಲಿಲ್ಲ!

ಆತ ನನ್ನ ದೂರದ ಸಂಬಂಧಿಕನೇ ಆಗಿದ್ದರು ನಮ್ಮಿಬ್ಬರಿಗೂ ಪರಿಚಯವಾಗಿದ್ದು ಮಾತ್ರ, ಫೇಸ್‌ಬುಕ್‌ನಲ್ಲಿ! ಮೊದ ಮೊದಲು ಊಟ ಆಯ್ತಾ, ತಿಂಡಿ ಆಯ್ತಾ ? ಅಷ್ಟೇ ವಿಚಾರಿಸುತ್ತಿದ್ವಿ. ನಂತರ ಹಾಗೇ ಮೊಬೈಲ್‌ ನಂಬರ್‌ ವಿನಿಮಯಮಾಡಿಕೊಂಡಿದ್ದಾಯ್ತು. ಕೆಲವೇ ದಿನಗಳ ನಂತರ, ದಿನವಿಡೀ ಚಾಟಿಂಗ್‌ ಮಾಡುವುದು ಇಬ್ಬರಿಗೂ ಫ‌ುಲ್‌ ಟೈಂ ಕೆಲಸವೇ ಆಯ್ತು.

ಇಬ್ಬರ ಇಷ್ಟ ಕಷ್ಟಗಳ ಬಗ್ಗೆ ಅದೆಷ್ಟೋ ಚರ್ಚೆಗಳು ನಡೆದವು. ಅಷ್ಟಾದ ಮೇಲೆ ಕೇಳಬೇಕೆ? ಪ್ರೇಮ ನಿವೇದನೆಯೂ ಆಗೋಯ್ತು. ಒಂದೆರಡು ವಾರ ಎಲ್ಲವೂ ಸರಿಯಾಗೇ ಇತ್ತು. ನಂತರ ಆತ ಮನೆಯವರನ್ನ ಒಪ್ಪಿಸುವುದು ಕಷ್ಟ , ಮನೆಯರ ಮಾತು ಮೀರಲು ನನಗಿಷ್ಟವಿಲ್ಲ ಎಂದ. ನಾನು ಆತನನ್ನ ಹೆಚ್ಚು ಒತ್ತಾಯ ಮಾಡಲಿಲ್ಲ! ಆಗಲೇ ಅವನು “ನೀನಿನ್ನೂ ಚಿಕ್ಕವಳು ಮೊದಲು ಡಿಗ್ರಿ ಮುಗಿಸು’ ಎಂದ. ಅದಕ್ಕೂ ಒಪ್ಪಿಕೊಂಡೆ. ಯಾಕೆಂದರೆ, ಅವನ ನಿರ್ಧಾರ ಎಂದಿಗೂ ಸರಿಯಾಗೇ ಇರುತ್ತದೆಯೆಂಬ ನಂಬಿಕೆ ನನ್ನದು. ನನಗಾಗಿದ್ದು ಕ್ರಶ್? ಲವ್ವಾ? ಅಂತಾ ತಿಳಿದುಕೊಳ್ಳವ ಮೊದಲೇ ಎಲ್ಲಾ ಮುಗಿದು ಹೋಗಿತ್ತು. ಇವೆಲ್ಲಾ ಆಗಿ ಬಹಳಷ್ಟು ದಿನಗಳು ಕಳೆದುಹೋದರೂ ನೆನಪುಗಳು ಮಾತ್ರ ಹಾಗೇ ಇವೆ. ನಾವಿಬ್ಬರೂ ಈಗಲೂ ಚಾಟ್‌ ಮಾಡುತ್ತೇವೆ. ಆದರೆ ಮೊದಲಿನಂತಲ್ಲ ಅಷ್ಟೆ.

ಸಿಂಧು ಹೆಗಡೆ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.