ಗಡಿನಾಡಿನ ನುಡಿ ಉತ್ಸವದಲ್ಲಿ ನಾದ ನಿನಾದ
Team Udayavani, Mar 6, 2020, 3:40 AM IST
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಏಳನೆಯ ಕೇರಳ ರಾಜ್ಯ ಕನ್ನಡ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮ ಸಹಸ್ರಾರು ಕನ್ನಡ ಮನಸ್ಸುಗಳಿಗೆ ಮುದ ನೀಡಿತು. ಎರಡು ದಿನಗಳ ಕೇರಳ ಕರ್ನಾಟಕ ಉತ್ಸವದ ಮೊದಲ ದಿನ ಕುಶಾಲನಗರದ ನಾದಾಂತ ನಾಟ್ಯ ಮಯೂರಿ ನೃತ್ಯಾಲಯದ ಪ್ರತಿಭೆಗಳು ವಿ| ಮಂಜುಭಾರ್ಗವಿ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಮಂಜುಭಾರ್ಗವಿ ಅವರ ಜೊತೆ ನಾದಾಂತದ ವಿದ್ಯಾರ್ಥಿಗಳಾದ ಲಾವಣ್ಯ ಬಿ.ಸಿ., ಪೂಜಾ ಎಸ್., ಶ್ರೇಣಿ ಗೌಡ, ಅಂಕಿತಾ ಬಾಲರಾಜ್ ಶೃತಿ ಮಧುರವಾದ ಹಾಡುಗಳಿಗೆ ಭಾವನೆಯ ಬಲೆ ಹೆಣೆದು ಭಾವಪರವಶವಾಗಿಸಿದರು.
ಪ್ರಾರಂಭದಲ್ಲಿ ಭೋ ಶಂಭೋ… ಹಾಡಿಗೆ ಹೆಜ್ಜೆ ಹಾಕಿದ ಕಲಾವಿದರು ಬಳಿಕ ಗಣೇಶ ಪುಷ್ಪಾಂಜಲಿ ಸಲ್ಲಿಸಿದರು. ಕನ್ನಡ ನಾಡುನುಡಿಗೆ ಸಂಬಂಧಿಸಿದ ರಚನೆಗಳಿಗೂ ಭಾವಪೂರ್ಣವಾಗಿ ನರ್ತಿಸಿದರು. ವಚನ ನೃತ್ಯ ಗಮನ ಸೆಳೆಯಿತು. ನಾದಾಂತ ನಾಟ್ಯಮಯೂರಿ ನೃತ್ಯಾಲಯದ ನಾದವೇದ ನಿನಾದ ಭಾವ ಅನುಭವದ ಅನುಭಾವ ಮಂಟಪದಲ್ಲಿ ಅದ್ಭುತ ಸನ್ನಿವೇಶ ಸೃಷ್ಟಿಸಿತು.
ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ