ನರ್ತನಾವರ್ತನದಲ್ಲಿ ಅನುರಣಿಸಿದ ಕ್ರಿಸ್ಟೋಫ‌ರ್‌ ನೃತ್ಯ

ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ ಪ್ರಸ್ತುತಿ

Team Udayavani, Mar 13, 2020, 6:03 PM IST

kristofar

ಶಿವನ ತಾಂಡವ ನೃತ್ಯದಲ್ಲಿ ಶಾಂತ ರಸವನ್ನು ಪ್ರತಿಪಾದಿಸುವುದು ಸವಾಲಿನ ಕೆಲಸ. ಕ್ರಿಸ್ಟೋಫ‌ರ್‌ರವರು ಶಾಂತಸ್ವರೂಪಿಯಾಗಿ ಆನಂದ ತಾಂಡವ ನೃತ್ಯವಾಡುವ ಚಿದಂಬರ ನಟರಾಜನ ವರ್ಣನೆಯನ್ನು ಬಹಳ ಘನವಾಗಿ ಮಾಡಿದರು.

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ವಾರ್ಷಿಕ ಅಂತಾರಾಷ್ಟ್ರೀಯ ನೃತ್ಯೋತ್ಸವ ನರ್ತನಾವರ್ತನ -2020ರಲ್ಲಿ ಆಸ್ಟ್ರೇಲಿಯದ ನೃತ್ಯ ಕಲಾವಿದ ಕ್ರಿಸ್ಟೋಫ‌ರ್‌ ಗುರುಸ್ವಾಮಿಯವರಿಂದ ಅದ್ಭುತವಾದ ಭರತನಾಟ್ಯ ಇತ್ತೀಚೆಗೆ ನಡೆಯಿತು. ಮುತ್ತುಸ್ವಾಮಿ ದೀಕ್ಷಿತರ ಪಂಚಭೂತಲಿಂಗ ಸ್ತುತಿಗಳಲ್ಲಿ ಒಂದಾದ ಆನಂದ ನಟನಪ್ರಕಾಶಂ ಕೀರ್ತನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಶಿವನ ತಾಂಡವ ನೃತ್ಯದಲ್ಲಿ ಶಾಂತ ರಸವನ್ನು ಪ್ರತಿಪಾದಿಸುವುದು ಸವಾಲಿನ ಕೆಲಸ. ಕ್ರಿಸ್ಟೋಫ‌ರ್‌ರವರು ಶಾಂತಸ್ವರೂಪಿಯಾಗಿ ಆನಂದ ತಾಂಡವ ನೃತ್ಯವಾಡುವ ಚಿದಂಬರ ನಟರಾಜನ ವರ್ಣನೆಯನ್ನು ಬಹಳ ಘನವಾಗಿ ಮಾಡಿದರು. ಎರಡನೆಯ ನೃತ್ಯ ಮುಖ್ಯ ಪ್ರಸ್ತುತಿಯಾದ ಪದವರ್ಣ. ಲಾಲ್ಗಡಿ ಜಿ.ಜಯರಾಮನ್‌ರವರ ಚಾರುಕೇಶಿ ರಾಗದ ಇನ್ನುಂ ಎನ್ಮನಂ ಅರಿಯಾದ ಪದವರ್ಣದಲ್ಲಿ ಕೃಷ್ಣನನ್ನು ಸಖನಾಗಿ ತನ್ನೆಲ್ಲ ಮನದ ದುಗುಡವನ್ನು ಅರುಹುವ ದೀನನಾಗಿ, ಭಕ್ತನಾಗಿ ಕಲಾವಿದರು ಬಹಳ ಮಾರ್ಮಿಕವಾಗಿ ಪ್ರಸ್ತುತಪಡಿಸಿದರು. ತನ್ನ ಜೀವನದ ಅನುಭವದಲ್ಲಿ ರೂಪುಗೊಂಡ ಈ ವರ್ಣದ ಸಾಹಿತ್ಯಾಭಿವ್ಯಕ್ತಿ ಇತರ ಕಲಾವಿದರು ಮಾಡುವ ರೀತಿಗಿಂತ ಬಹಳ ವಿಭಿನ್ನವಾಗಿತ್ತಲ್ಲದೆ ಜೀವಾತ್ಮ ಪರಮಾತ್ಮನಲ್ಲಿ ಮಾಡಿಕೊಳ್ಳುವ ನಿವೇದನೆ ಹಾಗೂ ಅವರೀರ್ವರ ಶ್ರೇಷ್ಠ ಸಮಾಗಮ ಒಂದು ಅಲೌಕಿಕ ಜಗತ್ತನ್ನು ತೆರೆದು ಓರ್ವ ಅನಿವಾಸಿ ಭಾರತೀಯನಲ್ಲಿ ಇಷ್ಟು ಮನೋಧರ್ಮ ಮೂಡಿಬರಲು ಸಾಧ್ಯವೇ ಎಂದು ಅಚ್ಚರಿ ಪಡುವಂತಾಯಿತು.

ಮೂರನೆಯ ನೃತ್ಯ ರಾಮ-ಸೀತೆಯರ ಮೊದಲ ಭೇಟಿಯನ್ನು ವರ್ಣಿಸುವ ಭೈರವಿ ರಾಗದ ರಚನೆಯಾದ ಯಾರೋ ಇವರ್ಯಾರೋ… ಎಂಬ ಪದಂ. ಇದರಲ್ಲಿ ರಾಮ-ಸೀತೆಯರ ನಡುವೆ ಹುಟ್ಟಿಕೊಳ್ಳುವ ನವಿರಾದ ಸಾತ್ವಿಕ ಶೃಂಗಾರ, ರಾಮನ ನಾಜೂಕಾದ ಚಲನೆಗಳು, ಅವನ ಮನದಲ್ಲಿ ಸೀತೆಯ ಬಗ್ಗೆ ಮೂಡಿದ ವಿಶೇಷ ಆಕರ್ಷಣೆ, ಇವೆಲ್ಲವನ್ನು ಕ್ರಿಸ್ಟೋಫ‌ರ್‌ ಪಾತ್ರದ ಘನತೆಯರಿತು ಕಲಾತ್ಮಕವಾಗಿ ನಿರೂಪಿಸಿದರು. ಅನಂತರದ ಪ್ರಸ್ತುತಿ ರಾಮನಾಟಕಂನಿಂದ ಆಯ್ದ ಭಾಗ. ರಾವಣನ ಅರಮನೆಯಲ್ಲಿ ಹನುಮಂತ ಹಾಗೂ ರಾವಣರ ವಾಗ್ಯುದ್ಧವನ್ನು ವೀರರಸಭರಿತವಾಗಿ ಕಲಾವಿದ ಪ್ರಸ್ತುತಪಡಿಸಿದರು. ಕೇವಲ ಮುಖಾಭಿನಯವಲ್ಲದೆ ಅದಕ್ಕೆ ತಕ್ಕದಾದ ಉತ್ಪವನಗಳು, ಆಕಾಶಚಾರಿಗಳು, ಭ್ರಮರಿಗಳು ಒಳ್ಳೆಯ ರಸೋತ್ಪತ್ತಿಗೆ ಕಾರಣವಾಯಿತು. ಅನಂತರ ಪ್ರಸಿದ್ಧವಾದ ದೇವರನಾಮ ಆಡಿಸಿದಳೆಶೋದದಲ್ಲಿ… ಯಶೋದೆಯ ವಾತ್ಸಲ್ಯದ ಸಂಪೂರ್ಣ ಅನುಭವ ಪ್ರೇಕ್ಷಕರಿಗಾಯಿತು. ಗುರು ಬೃಗಾ ಬೆಸೆಲ್‌ರವರ ಕಲ್ಪನೆಯ ನೃತ್ಯ ಸಂಯೋಜನೆ ಇಷ್ಟವಾಯಿತು. ಕೊನೆಯ ನೃತ್ಯ ತಿಲ್ಲಾನ ಕಲಾಕ್ಷೇತ್ರ ಶೈಲಿಯಲ್ಲಿದ್ದು ಕ್ಲಿಷ್ಟಕರವಾದ ಸಾಂಪ್ರದಾಯಿಕ ಅಡವುಗಳಿಂದ ಕೂಡಿದ್ದು ಚೇತೋಹಾರಿಯಾಗಿತ್ತು.

ಕ್ರಿಸ್ಟೋಫ‌ರ್‌ರವರಿಗೆ ಹಿಮ್ಮೇಳದಲ್ಲಿ ಸಹಕರಿಸಿದವರು ಹಾಡುಗಾರಿಕೆಯಲ್ಲಿ ಭಾವಪೂರ್ಣವಾಗಿ ಹಾಡಿದ ಅಶ್ವತ್ಥನಾರಾಯಣನ್‌, ನಟುವಾಂಗಗೈದ ಕು| ಸುದರ್ಶಿನಿ, ಮೃದಂಗದಲ್ಲಿ ಕಿರಣ್‌ ಪೈ ಹಾಗೂ ಪಿಟೀಲಿನಲ್ಲಿ ಗಣರಾಜ್‌ ಕಾರ್ಲೆ.

ವಿ| ಮಂಗಳ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.