ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!


Team Udayavani, Mar 31, 2020, 3:12 PM IST

ಶಿಕ್ಷಕಿಯಾದೆ, ಐಸಿಎಸ್‌ ಕೂಡ ಮಾಡಿದೆ!

ಅಪ್ಪ, ಅಮ್ಮ ಇಬ್ಬರೂ ಬ್ಯಾಂಕ್‌ ಉದ್ಯೋಗಿಗಳಾಗಿದ್ದುದರಿಂದ, ನಾನು-ನನ್ನ ತಂಗಿ ಅಜ್ಜಿ ಮನೆಯಲ್ಲಿ ಬೆಳೆದೆವು. ಅದು ಹಳ್ಳಿಯಾದ್ದರಿಂದ, ಐದನೇ ತರಗತಿಯವರೆಗೆ ಕನ್ನಡ ಶಾಲೆ ಇತ್ತು. ಬರೀ ಮೂರು ಶಿಕ್ಷಕರು ಇದ್ದರು. ಐದನೇ ತರಗತಿಗೆ ಬಂದಾಗ ಒಂದನೇ ತರಗತಿಗೆ ಅಆಇಈ ಕಲಿಸುವಷ್ಟು ಬುದ್ಧಿವಂತಿಕೆ ನನಗೆ ಇತ್ತು.

ಹಾಗಾಗಿ, ಚಿಕ್ಕಂದಿನಿಂದಲೂ ಮುಂದೆ ನಾನು ಶಿಕ್ಷಕಿ ಆಗಬೇಕು ಎಂಬ ಕನಸು ಕಾಣುತ್ತಿದ್ದೆ. ಆರನೇ ತರಗತಿಗೆ ಬಂದಾಗ, ಅಪ್ಪ- ಅಮ್ಮನ ಜೊತೆ ಇರುವ ಅವಕಾಶ ಸಿಕ್ಕಿತು. ಉಡುಪಿಯ ಕಾನ್ವೆಂಟ್‌ನಲ್ಲಿ ಹತ್ತನೇ ತರಗತಿಯವರೆಗೆ ಓದಿದೆ. ಅಲ್ಲಿಯ ಸಿಸ್ಟರ್ಸ್‌ರವರ ಶ್ರದ್ಧಾಪೂರ್ವಕ ಕೆಲಸ ನೋಡಿ ನನಗಂತೂ ಶಿಕ್ಷಕಿ ಆಗಲೇಬೇಕು ಎಂಬ ಆಸೆ ಮತ್ತಷ್ಟು ಗಟ್ಟಿಯಾಯಿತು. ಮನೆಗೆ ಬಂದ ನೆಂಟರು,ದೊಡ್ಡವಳಾದ ಮೇಲೆ ಏನಾಗುತ್ತೀಯಾ ಎಂದಾಕ್ಷಣ ಟೀಚರ್‌ ಎನ್ನುತ್ತಿದ್ದೆ. ಅಷ್ಟರಲ್ಲಿ ನಮ್ಮ ಅಪ್ಪಾಜಿ, ಮಧ್ಯೆ ಬಾಯಿ ಹಾಕಿ… ಇವಳಿಂದ ಐ.ಸಿ.ಎಸ್‌. ಮಾಡಿಸುತ್ತೇನೆ ಎಂದು ಹೇಳಿ ಮುಗುಳು ನಗುತ್ತಿದ್ದರು. ಅದೇನೋ ಏನೋ ದೊಡ್ಡ ಹುದ್ದೆ ಅಂತ ನಾನು ಅಂದು ಕೊಂಡದ್ದೆ.  ನಿಜ ಏನೆಂದರೆ, ಐ.ಸಿ.ಎಸ್‌. ಎಂಬುದರ ಅರ್ಥ, ಇಂಡಿಯನ್‌ ಕುಕಿಂಗ್‌ ಸರ್ವಿಸ್‌!.

ಅಂದರೆ, ಅಡುಗೆ ಮಾಡುವುದು ಅಂತ ತಿಳಿದು ಕೊಳ್ಳುವುದಕ್ಕೆ ಬಹಳ ವರ್ಷಗಳೇ ಹಿಡಿಯಿತು. ಮುಂದೆ ಡಿಗ್ರಿ ಪೂರೈಸಿ, ಬಿ.ಎಡ್‌. ಮುಗಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಿಕ್ಷಕಿ ಆಗಿ ನನ್ನ ಕನಸನ್ನು ಈಡೇರಿಸಿಕೊಂಡೆ. ಅಷ್ಟರಲ್ಲೇ ನೆಂಟಸ್ತಿಕೆ ಕೂಡಿ ಬಂದು ಮದುವೆಯೂ ಆಯಿತು. ನನ್ನ ಯಜಮಾನರು ಕೆಲಸಕ್ಕೆ ಹೋಗಲು ಅನುಮತಿ ಕೊಟ್ಟರು. ಕೆಲವು ದಿನಗಳ ನಂತರ ಏಳನೇ ತರಗತಿಯ ಕ್ಲಾಸ್‌ ಟೀಚರ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿತು. ಬಾಲ್ಯದ ಕನಸು ನನಸಾಯಿತು ಎಂಬುದು ನನ್ನ ಖುಷಿ . ಇದು ಜಾಸ್ತಿ ದಿನ ಇರಲಿಲ್ಲ. ಮಕ್ಕಳಾದ ಮೇಲೆ, ಅವರ ಆರೈಕೆಗೋಸ್ಕರ ಕೆಲಸ ಬಿಡಬೇಕಾಯಿತು. ಆದರೇನಂತೆ, ಕಲಿತ ವಿದ್ಯೆಯಿಂದ ನನ್ನ ಮಕ್ಕಳಿಗೆ ಟ್ಯೂಶನ್‌ಗೆ ಕಳುಹಿಸದೇ ವಿದ್ಯಾಭ್ಯಾಸ ಕಲಿಸಲು ಅನುಕೂಲಯಿತು.

ಈಗ ಮಕ್ಕಳಿಗೆ ತರಾವರಿ ಅಡುಗೆ ಮಾಡುವುದರಲ್ಲಿ ಪರಿಣತಿ ಹೊಂದಿದ್ದೇನೆ. ಬಿಡುವಿನ ವೇಳೆಯಲ್ಲಿ ಅಡುಗೆಗಳ ಬಗ್ಗೆ ಬರೆಯುತ್ತೇನೆ. ಬಾಟನಿ ಓದಿದ್ದರಿಂದ ತಾರಸಿ ತೋಟ ಮಾಡಲು ಸಹಾಯವಾಗಿದೆ. ಈಗ ಅತ್ತೆ, ಮಕ್ಕಳು, ಗಂಡನೊಂದಿಗೆ ಸಂತೋಷದಿಂದ ಕಳೆಯುತ್ತಿದ್ದೇನೆ. ಬಗೆಬಗೆಯ ಅಡುಗೆ ಮಾಡುವಾಗ ಅಪ್ಪಾಜಿಯು “ಇವಳನ್ನು ಐ.ಸಿ.ಎಸ್‌. ಮಾಡಿಸ್ತೇನೆ’ ಎಂದಿದ್ದ ಮಾತು ಯಾವಾಗಲೂ ನೆನಪಾಗುತ್ತದೆ. ಅಡುಗೆಯೂ ಒಂದು ಕಲೆ ಎಂದಮೇಲೆ ನಾನು ಐ.ಸಿ.ಎಸ್‌. ಪದವೀಧರೆ ಎನ್ನಲು ಬಹಳ ಸಂತೋಷವೂ ಆಗುತ್ತದೆ.

 

-ಸಹನಾ ಎಸ್‌. ಭಟ್‌

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.