ನೀನೆಂದರೆ ನನ್ನೊಳಗೆ..


Team Udayavani, Mar 31, 2020, 3:32 PM IST

ನೀನೆಂದರೆ ನನ್ನೊಳಗೆ..

ಕೃಷ್ಣ ಸುಂದರಿ… ಅಚಾನಕ್ಕಾಗಿ ಎದುರಾಗಿ, ಬಚ್ಚಿಟ್ಟಿದ್ದ ಹಳೇ ನೆನಪುಗಳ ಸುರುಳಿಯನ್ನು ಬಿಚ್ಚಿಟ್ಟುಹೋದೆಯಲ್ಲೇ… ಬದುಕು ಸರಳ ಅಂದುಕೊಂಡಾಗೆಲ್ಲಾ, ಛಕ್ಕನೆ ಎದುರಾದ ಯಾವುದೋ ತಿರುವು, ಮತ್ತೆಲ್ಲೋ ಬಿಟ್ಟು ಬಂದಿದ್ದ ಮರೆವು, ಯಾವುದೋ ಬಣ್ಣದೊಳಗೆ ಅವಿತಿದ್ದ ಚೆಲುವು. ಮತ್ತಾವುದೋ ಕಣ್ಣೊಳಗೆ ಅಡಗಿದ್ದ ಒಲವು. ಈ ಎಲ್ಲ ನೆನಪುಗಳು ಕಿಡಿಯಂತೆ ಕಳೆದುಹೋಗಿದ್ದ ಅರೆ ಕ್ಷಣ, ಒಳಗೆಲ್ಲೋ ಹಿಡಿಹಿಡಿ ಬೆಳಕಾಗಿ ಕಾಣುತ್ತದೆ.  ತಕ್ಷಣ, ಮುಗಿಯದ ಹಾದಿಯಿದೆ ಎಂದುಕೊಂಡು ನಡೆಯುವವನಿಗೆ ಕಡಲು ಎದುರಾಗಿ ಕಂಗೆಡಿಸುವಂತೆ, ಈ ಬದುಕ ಪಯಣ. ಅದರಲ್ಲಿ ನಿನ್ನ ನೆನಪು.

ಯಾಕೋ ನಿನ್ನೆದುರು ಮಾತಿಗಿಂತ ಮೌನ ಹೆಚ್ಚು ಮಾತಾಡುತ್ತದೆ ಅನ್ನಿಸಿತು. ಕಂಗೆಟ್ಟ ಕಡಲ ಎದುರು ನಿಂತವನಿಗೊಂದು ಹಾಯಿದೋಣಿ ಸಿಕ್ಕಂತೆ. ಅನೂಹ್ಯ ಕ್ಷಣವೊಂದು ಉಲ್ಲಾಸದ ಜತೆ ನಡೆದು ಬಂದು ಕೈ ಹಿಡಿದಂತೆ. ಏಕತಾನತೆಯ ಬದುಕಿನ ನೀಲಾಕಾಶದಲಿ ಕಾಮನಬಿಲ್ಲೊಂದು ಮೂಡಿಬಂದಂತೆ, ರಾತ್ರಿಯ ನೀರವತೆಯಲ್ಲಿನಕ್ಷತ್ರಗಳು ನಕ್ಕಂತೆ, ಹಗಲಿನ ಗಜಿಬಿಜಿಯ ಸಂತೆಯಲ್ಲೂ ಸ್ವಂತದೊಂದು ದ್ವೀಪ ಸಿಕ್ಕಂತೆ. ಖಾಲಿ ಖಾಲಿಯಿದ್ದ ಚಿತ್ತಭಿತ್ತಿಯಲ್ಲಿ ಹೊಸತೊಂದು ಚಿತ್ರ ಮೂಡಿದಂತೆ. ಬದುಕಿಗೆ ಏನೋ ವಿವರಿಸಲಾಗದ ಹೊಸ ಹುರುಪು, ಮನಸಿಗೆ ಬಣ್ಣಿಸಲಾಗದ ಹೊಸ ಹೊಳಪು,

ಇದೆಲ್ಲಾ ಹೇಗಾಯಿತು ಅಂತ ನನ್ನ ನಾನೇ ಕೇಳಿಕೊಳ್ಳುತ್ತಲೇ ಇದ್ದೇನೆ. ನನ್ನೊಳಗೆ ಇಷ್ಟೊಂದು ಆಳವಾಗಿ ನೀ ಇದ್ದೀಯೆಂಬುದ ತಿಳಿಸಲು ನೀನೇ ಎದುರಿಗೆ ಬರಬೇಕಾಯ್ತು ನೋಡು. ಕಾಲವೆಂಬುದು ಎಂಥಾ ಕ್ರೂರಿಯಲ್ಲವಾ? ಅದು ಸುಳ್ಳು ಸುಳ್ಳೇ ಮರೆವಿನ ಶಾಪ ಕೊಟ್ಟಂತೆ ನಾಟಕವಾಡಿ, ನೆನಪುಗಳ ಬುತ್ತಿಯನ್ನು ಕೈಗಿಟ್ಟುಹೋಗುತ್ತದೆ. ಬದುಕಿನ ಪಯಣದ ಹಾದಿಯಲ್ಲಿ ಇವತ್ತಿನ ಹಸಿವುನೀಗಿಕೊಳ್ಳಲು ಬುತ್ತಿ ಬಿಚ್ಚಿದರೆ, ನೆನಪುಗಳ ಪಕ್ವಾನ್ನ. ನನ್ನ ಪಾಲಿನ ಬದುಕೇ ಹೀಗಿರುವಾಗ, ನಿನ್ನನ್ನು ಮರೆಯುವುದಾರೂ ಹೇಗೆ ಹೇಳು?

 

-ಜೀವ ಮುಳ್ಳೂರು

ಟಾಪ್ ನ್ಯೂಸ್

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.