ಸವಣೂರಿನ ಚರಂಡಿ ಸಮಸ್ಯೆಗೆ ಕೊನೆಗೂ ಮುಕ್ತಿ
Team Udayavani, Apr 2, 2018, 12:31 PM IST
ಸವಣೂರು: ಮಳೆಗಾಲದಲ್ಲಿ ಸವಣೂರಿನ ನಾಗರಿಕರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಚರಂಡಿ ಸಮಸ್ಯೆಗೆ ಈ ಬಾರಿ ಮುಕ್ತಿ ಸಿಗಲಿದೆ. ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಕಾಮಗಾರಿ ನಡೆಯುತ್ತಿದೆ.
ಚರಂಡಿ ನಿರ್ಮಾಣಕ್ಕೆ 2 ವರ್ಷಗಳ ಹಿಂದೆ ಇಲಾಖೆ ಮುಂದಾಗಿತ್ತು. ಇದಕ್ಕಾಗಿ ಖಾಸಗಿ ಕಟ್ಟಡಕ್ಕೆ ತೆರಳಲು ಇದ್ದ ದಾರಿ ಅಗೆಯಲಾಗಿತ್ತು.ಇದರಿಂದ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಸಮಸ್ಯೆ ಉಂಟಾಗಿತ್ತು. ನಂತರ ದಿನಗಳಲ್ಲಿ ತಕ್ಕಮಟ್ಟಿಗೆ ದುರಸ್ತಿ ಮಾಡಿತ್ತು.ಆದರೆ ಮೋರಿಯಲ್ಲಿ ತುಂಬಿದ ಮಣ್ಣನ್ನು ಹಾಗೇ ಬಿಡಲಾಗಿದ್ದು, ನಾಮ್ ಕೆವಾಸ್ತೆ ದುರಸ್ತಿ ಮಾಡಿದ್ದರು. ಇದರಿಂದ ಮಳೆನೀರು ಮೋರಿಯಲ್ಲಿ ಹೋಗದೇ ರಸ್ತೆಯಲ್ಲಿ ಹರಿಯುತ್ತಿತ್ತು. ಜತೆಗೆ ರಸ್ತೆ ಬದಿ ನಿಂತವರಿಗೆ ಕೆಸರು ನೀರಿನ ಸಿಂಚನವೂ ಆಗುತ್ತಿತ್ತು.
ರಸ್ತೆ ಅಗಲೀಕರಣ ಸಂದರ್ಭ ಮಾಡಿದ ಚರಂಡಿಯನ್ನು ಸರಿಯಾಗಿ ನಿರ್ಮಾಣ ಮಾಡದ್ದರಿಂದ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿತ್ತು ಜನತೆಗೆ ಸೊಳ್ಳೆ ಉತ್ಪಾದನಾ ಕೇಂದ್ರವೂ ಆಗಿತ್ತು. ಪ್ರತಿ ಮಳೆಗಾಲದಲ್ಲಿ ಇದೊಂದು ಸಮಸ್ಯೆ ಕಾಡುತ್ತಲೇ ಇತ್ತು. ಈ ಬಗ್ಗೆ ಸಾರ್ವಜನಿಕರು ಇಲಾಖೆಯನ್ನು ಕಾಮಗಾರಿಗೆ ಒತ್ತಾಯಿಸುತ್ತಲೇ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bollywood: ಮತ್ತೆ ನಿರ್ದೇಶನದತ್ತ ಕರಣ್ ಜೋಹರ್: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ
Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’
ಕಾರ್ತಿ ಸಿನಿ ಕೆರಿಯರ್ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್ -2ʼ
Davanagere; ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ: ಬಿ.ವೈ. ವಿಜಯೇಂದ್ರ