Cricket: ಭಾರತ-ಪಾಕಿಸ್ಥಾನ ಬದ್ಧ ವೈರಿಗಳ ಜಂಟಿ ಆತಿಥ್ಯ


Team Udayavani, Sep 25, 2023, 11:16 PM IST

cricekt

ಇಂಗ್ಲೆಂಡ್‌ ಮತ್ತು ಪ್ರುಡೆನ್ಶಿಯಲ್‌ ಕಂಪೆನಿ ಮೊದಲ 3 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಳಿಕ ಈ ಕೂಟ ನಿಧಾನವಾಗಿ ಕ್ರಿಕೆಟ್‌ ಜನಕರ ನಾಡಿನಿಂದ ವಿಮುಖವಾಗತೊಡಗಿತು. ವಿಶ್ವದ ಎಲ್ಲ ಕ್ರಿಕೆಟ್‌ ರಾಷ್ಟ್ರಗಳಿಗೂ ಇದನ್ನು ವಿಸ್ತರಿಸಬೇಕೆಂಬ ಒತ್ತಡ ಬಂದಾಗ ಐಸಿಸಿ ಇದಕ್ಕೆ ಮಣಿಯಲೇಬೇಕಾಯಿತು.

ಇಲ್ಲಿನ ಮೊದಲ ಫ‌ಲಾನುಭವಿಗಳೆಂದರೆ ಭಾರತ ಮತ್ತು ಪಾಕಿಸ್ಥಾನ. ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ ಈ ಎರಡು ದೇಶಗಳು ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳುವುದು ದೂರದ ಮಾತೇ ಆಗಿದ್ದರೂ ಕೂಟ ಮಾತ್ರ ಅತ್ಯಂತ ಯಶಸ್ವಿಯಾಗಿ ನಡೆದದ್ದು ಸುಳ್ಳಲ್ಲ.

ರಿಲಯನ್ಸ್‌ ವಿಶ್ವಕಪ್‌
1987ರ ಈ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಪ್ರಾಯೋಜಿಸಿದ್ದು ರಿಲಯನ್ಸ್‌ ಕಂಪೆನಿ. ಇಂಗ್ಲೆಂಡ್‌ನ‌ಲ್ಲಿ ನಡೆದದ್ದು 60 ಓವರ್‌ಗಳ ಪಂದ್ಯವಾದರೆ, ಏಷ್ಯಾಕ್ಕೆ ಬರುವಾಗ ಇದು 50 ಓವರ್‌ಗಳಿಗೆ ಇಳಿದಿತ್ತು. ಅದೇ 8 ತಂಡಗಳ, 2 ಗ್ರೂಪ್‌ಗ್ಳ, 2 ಸುತ್ತಿನ ಮುಖಾಮುಖೀ ಇದಾಗಿತ್ತು. ಟೆಸ್ಟ್‌ ಮಾನ್ಯತೆ ಪಡೆದಿದ್ದ ಎಲ್ಲ 7 ರಾಷ್ಟ್ರಗಳು ನೇರ ಪ್ರವೇಶ ಪಡೆದ್ದಿವು. ಜಿಂಬಾಬ್ವೆ ಐಸಿಸಿ ಟ್ರೋಫಿ ಗೆದ್ದು ಸತತ 2ನೇ ವಿಶ್ವಕಪ್‌ ಆಡುವ ಅವಕಾಶ ಪಡೆಯಿತು. ಫೈನಲ್‌ನಲ್ಲಿ ಅದು ನೆದರ್ಲೆಂಡ್ಸ್‌ಗೆ ಸೋಲುಣಿಸಿತ್ತು.

ಭಾರತ ಹಾಲಿ ಚಾಂಪಿಯನ್‌ ಆಗಿದ್ದರಿಂದ ಸಹಜವಾಗಿಯೇ ನೆಚ್ಚಿನ ತಂಡವಾಗಿತ್ತು. ಗಡಿಯಾಚೆ ಪಾಕಿಸ್ಥಾನ ಫೇವರಿಟ್‌ ಎನಿಸಿತ್ತು. ಒಂದು ಸೆಮಿಫೈನಲ್‌ ಭಾರತಕ್ಕೆ (ಮುಂಬಯಿ), ಇನ್ನೊಂದು ಸೆಮಿಫೈನಲ್‌ ಪಾಕಿಸ್ಥಾನಕ್ಕೆ (ಲಾಹೋರ್‌) ಮೀಸಲಾಯಿತು. ಫೈನಲ್‌ ಆತಿಥ್ಯ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಪಾಲಾಯಿತು.

ಮತ್ತೆ ಕಪಿಲ್‌ ಸಾರಥ್ಯ
1983ರಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದ ಕಪಿಲ್‌ದೇವ್‌ ಅವರೇ ತಂಡದ ಸಾರಥಿಯಾಗಿದ್ದರು. ಕಪಿಲ್‌ ಸೇರಿ ಚಾಂಪಿಯನ್‌ ತಂಡದ 6 ಮಂದಿ ಆಟಗಾರರಿದ್ದರು. “ಎ’ ವಿಭಾಗದಿಂದ ಭಾರತ, ಆಸ್ಟ್ರೇಲಿಯ; “ಬಿ’ ವಿಭಾಗದಿಂದ ಪಾಕಿಸ್ಥಾನ-ಇಂಗ್ಲೆಂಡ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟವು. ಪಾಕಿಸ್ಥಾನಕ್ಕೆ ಲಾಹೋರ್‌ನಲ್ಲಿ, ಭಾರತಕ್ಕೆ ಮುಂಬಯಿಯಲ್ಲಿ ಉಪಾಂತ್ಯ ಪಂದ್ಯ ಆಡುವ ಅವಕಾಶ ಲಭಿಸಿದ್ದರಿಂದ ಆಗಲೇ ಇತ್ತಂಡಗಳ ನಡುವೆ ಫೈನಲ್‌ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಸಂಭವಿಸಿದ್ದೇ ಬೇರೆ.

ಲಾಹೋರ್‌ನಲ್ಲಿ ನಡೆದ ಮೊದಲ ಉಪಾಂತ್ಯದಲ್ಲಿ ಪಾಕಿಸ್ಥಾನ 18 ರನ್ನುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು. ಮರುದಿನ ಭಾರತ 35 ರನ್ನುಗಳಿಂದ ಇಂಗ್ಲೆಂಡ್‌ಗೆ ತಲೆಬಾಗಿತು. ಅಲ್ಲಿಗೆ ಎರಡೂ ಆತಿಥೇಯ ರಾಷ್ಟ್ರಗಳ ಕತೆ ಮುಗಿಯಿತು. ಭಾರತ ಮಾಜಿ ಆಯಿತು!

ಇಂಗ್ಲೆಂಡ್‌-ಆಸ್ಟ್ರೇಲಿಯ ಫೈನಲ್‌
ಕೋಲ್ಕತಾ ಫೈನಲ್‌ನಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಎದುರಾದವು. ಇತ್ತಂಡಗಳಿಗೂ ಇದು 2ನೇ ಫೈನಲ್‌ ಆಗಿತ್ತು. ಮೊದಲ ಫೈನಲ್‌ನಲ್ಲಿ ಎರಡೂ ತಂಡಗಳು ಎಡವಿದ್ದವು. ಹೀಗಾಗಿ ಇಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣವಾಗುತ್ತಿತ್ತು. ಈ ಅವಕಾಶ ಎರಡೂ ತಂಡಗಳಿಗಿತ್ತು. ಆದರೆ ಇಂಗ್ಲೆಂಡ್‌ ಇದನ್ನು ಕೈಯಾರೆ ಕಳೆದುಕೊಂಡಿತು. 7 ರನ್ನುಗಳಿಂದ ಗೆದ್ದ ಆಸ್ಟ್ರೇಲಿಯ ಕಿರೀಟ ಏರಿಸಿಕೊಂಡಿತು.

ಅಲನ್‌ ಬೋರ್ಡರ್‌ ನೇತೃತ್ವದ ಆಸ್ಟ್ರೇಲಿಯ ಗಳಿಸಿದ್ದು 5ಕ್ಕೆ 253 ರನ್‌. ಇಂಗ್ಲೆಂಡ್‌ 8ಕ್ಕೆ 246 ರನ್‌ ಗಳಿಸಿ ಗೆಲುವಿನ ಗಡಿಯಲ್ಲಿ ಮುಗ್ಗರಿಸಿತು. ಅನಗತ್ಯ ರಿವರ್ಸ್‌ ಸ್ವೀಪ್‌ಗೆ ಮುಂದಾಗಿ ವಿಕೆಟ್‌ ಕೈಚೆಲ್ಲಿದ ಆಂಗ್ಲರ ನಾಯಕ ಮೈಕ್‌ ಗ್ಯಾಟಿಂಗ್‌ ವಿಲನ್‌ ಎನಿಸಿಕೊಂಡರು. ಇಲ್ಲವಾದರೆ, ಬಹುಶಃ ಇಂಗ್ಲೆಂಡ್‌ ಮೊದಲ ವಿಶ್ವಕಪ್‌ ಎತ್ತಲು 2019ರ ತನಕ ಕಾಯಬೇಕಾದ ಸ್ಥಿತಿ ಎದುರಾಗುತ್ತಿರಲಿಲ್ಲವೋ ಏನೋ!

ಟಾಪ್ ನ್ಯೂಸ್

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

13

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

11

ಎಸ್‌ಐಟಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಿಎಂ ಗಮನಕ್ಕೆ ಬಂದಿಲ್ಲವೇ?‌: ಎಚ್‌ಡಿಕೆ

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಹಾರ್ದಿಕ್‌ ಜತೆ ವಿಚ್ಚೇದನದ ಸುದ್ದಿ ಬೆನ್ನಲ್ಲೇ ದಿಶಾ ಪಟಾನಿ ಗೆಳೆಯನ ಜತೆ ಕಾಣಿಸಿಕೊಂಡ ನತಾಶಾ

hardik pandya and natasa stankovic getting divorced?

Divorced? ಮುರಿದು ಬಿತ್ತಾ ಹಾರ್ದಿಕ್- ನತಾಶಾ ಸಂಬಂಧ? 70% ಆಸ್ತಿ ಕಳೆದುಕೊಳ್ತಾರಾ ಪಾಂಡ್ಯ?

IPL 2024; Who can get Orange Cap- Purple Cap? Here is the list

IPL 2024; ಯಾರಿಗೆ ಸಿಗಬಹುದು ಆರೆಂಜ್ ಕ್ಯಾಪ್- ಪರ್ಪಲ್ ಕ್ಯಾಪ್? ಇಲ್ಲಿದೆ ಪಟ್ಟಿ

Karthik’s advice helped me when i was struggling without rhythm: Virat Kohli

RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್‌ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ

court

Equestrian: ಆಡಳಿತ ನಿರ್ವಹಣೆಗೆ ಸಮಿತಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

19

Sullia: ವಾಹನಗಳಿಗೆ ಕಾರು ಢಿಕ್ಕಿ; ಹಾನಿ

17

Belthangady: ಅಪಘಾತದ ಗಾಯಾಳು ಯುವಕ ಸಾವು

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Udupi: ಎದೆ ನೋವಿನಿಂದ ವ್ಯಕ್ತಿ ಸಾವು

Kundapur: ಟಿ.ಟಿ. ಚರಂಡಿಗೆ; 12 ಮಂದಿಗೆ ಗಾಯ

Kundapur: ಟಿ.ಟಿ. ಚರಂಡಿಗೆ; 12 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.