ಒಂದ್ಸಲ ಹಲೋ ಅನ್ನಿ…
ಹಳೇ ನೆನಪುಗಳನ್ನು ಗುಡ್ಡೆ ಹಾಕಿಕೊಂಡು ಕೂತರೆ ಮನಸ್ಸು ಪ್ರಫುಲ್ಲವಾಗುತ್ತದೆ, ಗೊತ್ತಾ?
Team Udayavani, Apr 14, 2020, 9:48 AM IST
ಲಾಕ್ಡೌನ್ಗೆ ಮನಸ್ಸು ಒಗ್ಗಿಹೋಗಿರಬೇಕಲ್ವಾ? ಎಲ್ಲಾ ಕೆಲಸ ಮುಗೀತಲ್ಲ, ಇನ್ನೇನು ಮಾಡಬೇಕು? ಎನ್ನಬೇಡಿ. ಬೇಕಾದಷ್ಟು ಕೆಲಸ ಬಾಕಿ ಉಳಿದಿದೆ. ಬ್ಯುಸಿ ಷೆಡ್ನೂಲ್ನ ಕಾರಣಕ್ಕೆ, ಎಷ್ಟೋ ಸಂಬಂಧಗಳನ್ನು ನವೀಕರಿಸುವುದನ್ನೇ ಮರೆತಿದ್ದೀರಿ ಅಲ್ವಾ? ಜೊತೆಗೆ, ಅಯ್ಯೋ, ಅವನು ತುಂಬಾ ಬ್ಯುಸಿ ಎಂದು ಲೆಕ್ಕಹಾಕಿ, ಎಷ್ಟೋ ಜನ ನಿಮ್ಮಂದ ಉಳಿದಿರುತ್ತಾರೆ. ಬಿಡ್ರೀ, ಅವನು ಯಾವ ಕಾರ್ಯಕ್ರಮಕ್ಕೂ ಬರೊಲ್ಲ ಅಂತ ಷರಾ ಬರೆದುಬಿಟ್ಟಿರುತ್ತಾರೆ. ಅಷ್ಟೇ ಅಲ್ಲ, ತಮ್ಮ ಸುತ್ತಮುತ್ತ ಇರುವವರಿಗೂ ಹೀಗೆ ಹೇಳಿಬಿಟ್ಟಿರುತ್ತಾರೆ.
ಅದು, ನಿಮ್ಮ ಸಂಬಂಧಗಳ ಸುತ್ತಲೆಲ್ಲಾ ತಿರುಗಾಡುತ್ತಿರುತ್ತದೆ. ಸುಮ್ಮನೆ ಯೋಚನೆ ಮಾಡಿ, ನಿಮ್ಮ ದೊಡ್ಡಪ್ಪನ ತಂಗಿಯ ಮಗಳ ಹೆಸರು ಗೊತ್ತಿದೆಯಾ? ಚಿಕ್ಕಪ್ಪನ ಮೊಮ್ಮಗಳ ನಾಮಕರಣಕ್ಕೆ ಹೋಗಿದ್ರಾ? ಯಾವುದೂ ನೆನಪಿರುವುದಿಲ್ಲ. ಅವರ ಹೆಸರುಗಳೂ… ಈಗ, ಅವರಿಗೆಲ್ಲ ಒಂದು ಫೋನ್ ಮಾಡಿ ಹಲೋ ಹೇಳಿ, ಅವರ ಬದುಕಿನ ನೋವು- ನಲಿವುಗಳಿಗೆ ಕಿವಿಗೊಡಿ. ಆ ಕ್ಷಣದಿಂದಲೇ, ಬಂಧುಗಳು- ಗೆಳೆಯರು ನಿಮ್ಮನ್ನು ನೋಡುವ ಧಾಟಿ ಬದಲಾಗುತ್ತದೆ. ಅರೆ, ಇವನು ಎಷ್ಟು ಒಳ್ಳೆಯವನು, ನಾವಂದುಕೊಡಂತೆ ಇಲ್ಲ ಎಂಬ ಮಧುರ ಭಾವನೆ ಅವರಲ್ಲಿ ಮೂಡುತ್ತದೆ. ನಿಮ್ಮ ಮೊಬೈಲ್ ಲಿಸ್ಟ್, ಫೇಸ್ ಬುಕ್ನಲ್ಲಿರುವ ಫ್ರೆಂಡ್ಗಳನ್ನು ನೋಡಿ. ಅಲ್ಲಿ ನಿಮ್ಮ ಶಾಲಾ ದಿನಗಳ ಸ್ನೇಹಿತರು ಇದ್ದರೆ, ತಕ್ಷಣವೇ ಫೋನ್ ಮಾಡಿ ಮಾತಾಡಿ. ನಿಮ್ಮ ಹಳೇ ಫೋಟೋಗಳೇ ನಾದರೂ ಇದ್ದರೆ ಶೇರ್ ಮಾಡಿಕೊಳ್ಳಿ. ಆಗ, ಮತ್ತೂಂದಷ್ಟು ಘಟನೆಗಳು ಕಣ್ಣ ಮುಂದೆ ಬಂದು ಹೋದಾವು. ಹಳೇ ನೆನಪುಗಳನ್ನು ಗುಡ್ಡೆ ಹಾಕಿಕೊಂಡು ಕೂತರೆ ಮನಸ್ಸು ಪ್ರಫುಲ್ಲವಾ ಗುತ್ತದೆ, ಗೊತ್ತಾ? ಸಂಬಂಧಗಳ ನವೀಕರಣ ಬಹಳ ಮುಖ್ಯ. ಬ್ಯುಸಿ ಅನ್ನೋ ನೆಪದಲ್ಲಿ, ಕಳೆದುಕೊಂಡಿರುವ ಕೊಂಡಿಯನ್ನು ಸೇರಿಸೋಕೆ ಇದಕ್ಕಿಂತ ಒಳ್ಳೆಯ ಸಮಯ ಬೇಕೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್