ಹೊಸ ನಕ್ಷತ್ರದೊಂದಿಗೆ ಮಾತಾಡೋಣ ಬಾರೋ…


Team Udayavani, Feb 4, 2020, 4:58 AM IST

PRO-12

ನಿನ್ನ ಮೇಲೆ ಭಾವಗೀತೆ ಬರೆಯಲೋ ಭಕ್ತಿಗೀತೆ ಬರೆಯಲೋ ಎಂಬ ದಲವೆನಗೆ.ಧ್ರುವತಾರೆಗಳನ್ನು ಎಣಿಸುತ್ತ,ಗ್ರಹ,ನಕ್ಷತ್ರ, ಸಪ್ತರ್ಷಿ ಮಂಡಲಗಳೊಂದಿಗೆ ವಿಜ್ಞಾನದ ಹೊರತಾಗಿ ಮಾತನಾಡಲು ಕಲಿಸಿದ್ದು ನೀನೇ ಅಲ್ಲವೇನು?

ನೀನು ನನ್ನ ಲೈಫಿಗೆ ಬಂದ ಮೇಲೆ, ನನ್ನ ಲೈಫೇ ಬೇರೆಯಾಯಿತು ಕಣೋ.ನನ್ನ ಬಾಳಿಗೆ ಬಲಗಾಲಿಟ್ಟೇ ಒಳಗೆ ಬಂದೆಯೇನೋ ಎಂಬಂತೆ,ಅವತ್ತಿನಿಂದ ನನಗೆ ಶುಭ ಶಕುನಗಳೇ.ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ ಎಂದು ಹೇಳುವುದು ಯಾಕೋ ಸುಳ್ಳೆಂಬ ಅನುಮಾನವೆನಗೆ.ನನ್ನ ಯಶಸ್ಸಿನ ಹಿಂದಿರುವ ಯಶಸ್ವಿ ಪುರುಷ ನೀನೇ.ನಿನ್ನ ಹೆಸರನ್ನು ಬದಲಾಯಿಸುವ ಅವಕಾಶ ನೀಡಿದರೆ,ಮೂರು ಬಾರಿ ಕಿವಿಯಲ್ಲಿ ಯಶಸ್ವಿ ಎಂದು ಕೂಗಲೇನೋ ಗೆಳೆಯ?

ವಿಜ್ಞಾನ ಓದುವ ನಾನು ನಿನ್ನ ಕಂಡಾಗಲೇ ಕವನ, ಪತ್ರ ಬರೆಯಲು ಶುರುಮಾಡಿದ್ದು ಣೋ. ಪ್ರತಿಯೊಂದೂ ಆಶು ಕವನವೋ ಎಂಬಂತೆ ನನ್ನ ಕವನಗಳಿಗೆ ಅಂಕಿತನಾಮ ನೀನೇ.ಕಾವ್ಯನಾಮ ಯಾಕೆ ಬೇಕು ನಮ್ಮಿಬ್ಬರ ಪ್ರೇಮ ಕಾವ್ಯಕ್ಕೆ? ನನ್ನ ಪತ್ರಕ್ಕೆ ಉತ್ತರ ಬರೆದ ನಿನ್ನ ಶೈಲಿಯನ್ನು ಅನುಕರಿಸಿ ಪ್ರೇಮಪತ್ರ ಬರೆಯಲೂ ಶುರುಮಾಡಿದ ನನಗೆ ಪ್ರಬಂಧ ಬರೆಯಲು ಅದೇ ಸ್ಫೂರ್ತಿ ಕಣೋ.ಕಥೆ,ಕಾದಂಬರಿ ಬರೆಯುವ ಸಾಹಸ ಮಾಡುವ ಮುಂಚೆ ನನ್ನ ಲೇಖನಿಯನ್ನು ಹಾರಿಸಿಕೊಂಡು ಹೋಗಿಬಿಡು ಒಮ್ಮೆ,ನಿನ್ನ ಕಣ್ಣೋಟದಲ್ಲೇ ಹೊಸ ಕಥೆ ಹುಟ್ಟಿಬಿಡುವುದೇನೋ.

ಮರ,ಗಿಡ,ಪ್ರಾಣಿಪಕ್ಷಿಗಳ ಪ್ರಭೇದ ಕಾಣುತ್ತಿದ್ದ ನನಗೆ ಅವನ್ನು ಮುದ್ದಾಡಿ ಅದರ ಭಾಷೆಯಲ್ಲೇ ಅವುಗಳೊಂದಿಗೆ ಸಂವಹನ ಕಲಿಸಿದ್ದು ಮಾಮೂಲಿಯೇನು? ಅವುಗಳಲ್ಲಿಯೂ ಪ್ರೇಮಲೋಕ ತೋರಿಸಿದ ಕಿಶೋರ ನೀನು.

ಪ್ರಯೋಗ, ಫ‌ಲಿತಾಂಶ, ಆಮ್ಲ, ಪ್ರತ್ಯಾಮ್ಲ, ಟೆಸ್ಟ್ ಟ್ಯೂಬ್‌ ಎಂದು ವೈಜ್ಞಾನಿಕ ಲೋಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ವಾಸ್ತವಕ್ಕೆ ಕರೆತಂದವನೇ ನೀನು. ನಿನ್ನ ಮೇಲೆ ಭಾವಗೀತೆ ಬರೆಯಲೋ ಭಕ್ತಿಗೀತೆ ಬರೆಯಲೋ ಎಂಬ ಗೊಂದಲವೆನಗೆ.ಧ್ರುವತಾರೆಗಳನ್ನು ಎಣಿಸುತ್ತ,ಗ್ರಹ,ನಕ್ಷತ್ರ, ಸಪ್ತರ್ಷಿ ಮಂಡಲಗಳೊಂದಿಗೆ ವಿಜ್ಞಾನದ ಹೊರತಾಗಿ ಮಾತನಾಡಲು ಕಲಿಸಿದ್ದು ನೀನೇ ಅಲ್ಲವೇನು.ಮತ್ತೇಕೆ ತಡ,ಎಂದಿನಂತೆ ಇಂದು ಕುಳಿತು ನಮ್ಮ ನಿತ್ಯದ ಮಾಮೂಲಿ ಜಾಗದಲ್ಲಿ ಆ ಹೊಸ ನಕ್ಷತ್ರದೊಂದಿಗೆ ಮಾತನಾಡಲು ಬಂದು ಬಿಡು ನನ್ನ ಯಶಸ್ವಿ.

ಇಂತಿ ನಿನ್ನ ಪ್ರೀತಿಯ,
ಸಾವಿತ್ರಿ ಶ್ಯಾನುಭಾಗ್‌

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.