ನಿನ್ನ ದನಿಯಾಗಿ, ನಿನ್ನ ಕೊರಳಾಗಿ…


Team Udayavani, Aug 20, 2019, 5:00 AM IST

w-13

ಇಷ್ಟು ನಿಕಟವಾಗಿದ್ದ ನೀನು ಹಠಾತ್ತಾಗಿ ಕಾಣೆಯಾದಾಗ, ನಾನು ಪಟ್ಟ ನೋವು, ಯಾತನೆ ಬಣ್ಣಿಸಲಸಾಧ್ಯ. ಹೋದಲ್ಲೆಲ್ಲಾ ನಿನ್ನೇ ಅರಸುತ್ತಾ ನನ್ನ ಕಣ್ಣುಗಳು ಸೋತು ಹೋಗಿದ್ದವು. ನಿನ್ನ ಬಳಿ ಹಂಚಿಕೊಳ್ಳಲಾಗದೇ ನನ್ನ ಮನಸ್ಸಿನ ಭಾವನೆಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾ ಒದ್ದಾಡಿ ಹೋಗಿದ್ದೆ…

ಬಾಲ್ಯದಿಂದಲೂ ನನಗೆ ನಿನ್ನಲ್ಲಿ ಏನೋ ಆಕರ್ಷಣೆ. ನಿನ್ನ ಸ್ನಿಗ್ಧ ಸೌಂದರ್ಯಕ್ಕೆ ಮಾರು ಹೋದವಳು ನಾನು. ಶಾಲೆಯಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನೂ ನಿನ್ನೊಂದಿಗೆ ಹಂಚಿಕೊಂಡರೇನೇ ನನಗೆ ಸಮಾಧಾನ. ಬೆಳಗ್ಗೆ ಶಾಲೆಗೆ ಹೊರಡುವ ಧಾವಂತದಲ್ಲಿ ನಿನ್ನ ಕಡೆ ಗಮನ ಹರಿಸಲೂ ನನಗೆ ಸಮಯವಿರುತ್ತಿರಲಿಲ್ಲ. ಸಾಯಂಕಾಲ ಮನೆ ತಲುಪಿದೊಡನೆ ನನ್ನ ಕಣ್ಣುಗಳು ಅರಸುತ್ತಿದ್ದುದ್ದೇ ನಿನ್ನನ್ನು, ನಿನ್ನ ಬಳಿ ಹೇಳಿಕೊಳ್ಳಲು ಬೇಕಾದಷ್ಟು ವಿಷಯಗಳಿರುತ್ತಿದ್ದವಲ್ಲ, ಅದಕ್ಕೆ. ನಾನು ಶಾಲೆಯಿಂದ ಬರುವುದು ತಡವಾದಾಗ ಮನದಲ್ಲಿ ಏನೋ ಕಳವಳ, ಆತಂಕ, ಏನೋ ಕಳೆದುಕೊಂಡ ಭೀತಿ. ಈ ತಳಮಳ ಸ್ಥಿಮಿತಕ್ಕೆ ಬರುತ್ತಿದ್ದುದ್ದೇ ನಿನ್ನ ದರ್ಶನದಿಂದ. ಕೆಲವೊಮ್ಮ ವಾರಪೂರ್ತಿ ನಿನ್ನ ನೋಡುವ ಭಾಗ್ಯ ಲಭಿಸದೇ ಚಡಪಡಿಸಿದ್ದೂ ಇದೆ. ಭಾನುವಾರ ಬೆಳಗಾಗುವುದನ್ನೇ ಚಾತಕ ಪಕ್ಷಿಯಂತೆ ನಿರೀಕ್ಷಿಸುತ್ತಿದ್ದೆ, ವಾರಪೂರ್ತಿಯ ಸಮಾಚಾರಗಳನ್ನು ನಿನ್ನಲ್ಲಿ ಅರುಹಿ ನನ್ನ ಮನಸ್ಸನ್ನು ಹಗುರಗೊಳಿಸಿಕೊಳ್ಳಲು.

ಇಷ್ಟು ನಿಕಟವಾಗಿದ್ದ ನೀನು ಹಠಾತ್ತಾಗಿ ಕಾಣೆಯಾದಾಗ, ನಾನು ಪಟ್ಟ ನೋವು, ಯಾತನೆ ಬಣ್ಣಿಸಲಸಾಧ್ಯ. ಹೋದಲೆಲ್ಲಾ ನಿನ್ನನ್ನೇ ಅರಸುತ್ತಾ ನನ್ನ ಕಣ್ಣುಗಳು ಸೋತು ಹೋಗಿದ್ದವು. ನಿನ್ನ ಬಳಿ ಹಂಚಿಕೊಳ್ಳಲಾಗದೇ ನನ್ನ ಮನಸ್ಸಿನ ಭಾವನೆಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾ ಒದ್ದಾಡಿದ್ದೆ. ನಿನ್ನಷ್ಟು ಆತ್ಮೀಯತೆ ನನಗೆ ಬೇರೆ ಯಾರಲ್ಲೂ ಇರಲಿಲ್ಲ, ನಿನ್ನ ಆಗಮನವನ್ನೇ ಎದುರು ನೋಡುತ್ತಿದ್ದೆ. ನಿನ್ನ ಕ್ಷೇಮ ಸಮಾಚಾರ ತಿಳಿಯದೇ ತಳಮಳಿಸಿದ್ದೆ. ನೀನು ಹಿಂತಿರುಗಿ ಬರುವುದೇ ಇಲ್ಲವೇನೋ, ಇನ್ನು ನನ್ನ ನಿನ್ನ ಭೇಟಿ ಸಾಧ್ಯವೇ ಇಲ್ಲವೇನೋ ಎಂಬ ಕಳವಳ, ಏನೋ ಭೀತಿ.

ಎರಡು ವರ್ಷಗಳ ಹಿಂದೆ ನಿನ್ನ ಪುನರಾಗಮನದಿಂದ ನನ್ನಷ್ಟು ಸಂತೋಷ ಪಟ್ಟವರು ಈ ಪ್ರಪಂಚದಲ್ಲೇ ಇರಲಿಕ್ಕಿಲ್ಲ. ಇಷ್ಟು ವರ್ಷಗಳ ನನ್ನ ಮನಸ್ಸಿನ ಒತ್ತಡವನ್ನು ಅಣೆಕಟ್ಟು ಒಡೆದು ಬರುವ ಜಲಧಾರೆಯಂತೆ, ನನ್ನ ಮನಸ್ಸಿನ ಭಾವನೆಗಳು ಭೋರ್ಗರೆಯುತ್ತಿದ್ದವು.  ಈಗ ನೋಡಿದರೆ, ನೀನು ಆ ಮೊದಲಿನ ನೀನೇ ಅಲ್ಲ, ಆಕಾರ ಸಣ್ಣದಾಗಿದೆ, ಸ್ವರ ಬದಲಾಗಿದೆ ಎನ್ನುವರಲ್ಲ ನಿಜವೇ? ಬದಲಾದ ನಿನ್ನ ಸ್ವರವನ್ನು ಹೇಗೆ ಗುರುತಿಸಲಿ?
ಈಗ ನಾನು ನಿನ್ನನ್ನು ಕಾಣುತ್ತಿರುವುದು, ನಿನ್ನೊಡನೆ ನನ್ನ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿರುವುದು ನನ್ನ ಭ್ರಮೆಯೇ? ಇಷ್ಟು ವರ್ಷಗಳಿಂದ ನಿನ್ನನ್ನು ಕಾಣದೇ ಹಂಬಲಿಸಿದ ನನ್ನ ಮನಸ್ಸಿನ ಕಲ್ಪನೆಯೇ?

ಅನಿತಾ ಪೈ, ಮಂಗಳೂರು

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.