ಈ ಗಂಡು ಹೋದ್ರೆ ಇನ್ನೊಂದು ಸಿಗಬಹುದು…


Team Udayavani, Jan 15, 2020, 5:45 AM IST

mk-9

“ಗಂಡಿನವರು ಕುಳಿತಿದ್ದಾರೆ ಬಾರೇ…’ಎಂದು ಎಷ್ಟು ಹೇಳಿದರೂ ಕೇಳದೆ, ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು ಆಚೆ ಓಡಿಯೇಬಿಟ್ಟಳು.

ಅಡುಗೆ ಮನೆಯಲ್ಲಿ ಹಬ್ಬದ ಸಡಗರ, ಸಂಭ್ರಮ! ರವೆ ಹದವಾಗಿ ಹುರಿದು ತುಪ್ಪದೊಂದಿಗೆ ದ್ರಾಕ್ಷಿ, ಗೋಡಂಬಿ ಚೆನ್ನಾಗಿ ಸುರಿದು ಕೇಸರಿಬಾತ್‌ ಮಾಡಿ ಮುಚ್ಚಿಟ್ಟು, ಕ್ಯಾಪ್ಸಿಕಂ ಶ್ಯಾವಿಗೆ ಬಾತ್‌ ಮಾಡತೊಡಗಿದರು ಅಮ್ಮ. ಅಕ್ಕನನ್ನು ನೋಡಲು ಗಂಡಿನ ಕಡೆಯವರು ಬರುವ ಸುದ್ದಿ ಕೇಳಿದಾಗಿನಿಂದ, ಮನೆಯ ವಾತಾವರಣವೇ ಬದಲಾಗಿ ಹೋಗಿತ್ತು. ಕಿತ್ತು ಹೋದ ಗೋಡೆಗಳೂ, ಕ್ಯಾಲೆಂಡರ್‌ಗಳ ಆಶ್ರಯದಲ್ಲಿ ನಗು ಬೀರುತ್ತಾ ಅಭ್ಯಾಗತರ ಸ್ವಾಗತಕ್ಕೆ ಮನೆಯ ಮುಂದಿನ ರಂಗೋಲಿ, ಬಾಗಿಲ ತೋರಣ, ಹೊಸ ಉಡುಪು ಸೋಫಾಗಳ ಸಮೇತ ಕಾಯುತ್ತಾ ಇದ್ದವು..

ಹೊಸ ವಾಲೆ ಜುಮುಕಿ ತೊಟ್ಟು, ಹೊಸ ಹಸಿರು ಸೀರೆ ಉಟ್ಟು ಮಲ್ಲಿಗೆ ಹೂ ಮುಡಿದ ಅಕ್ಕ, ನಮ್ಮ ಕೀಟಲೆ ಮಾತಿಗೆ ನವವಧುವಿನಂತೆ ಕ್ಷಣ ಕ್ಷಣಕ್ಕೂ ನಾಚುತ್ತಾ “ಅವರು ಬಂದರೇನೇ…?’ ಅನ್ನುತ್ತಾ ಬೇಸರ ತರಿಸಿದ್ದಳು. ನನಗಾಗ 10-11 ವರ್ಷ. ಅಕ್ಕ ಹೇಳಿದಾಗಲೆಲ್ಲಾ ತಲೆಬಾಗಿಲ ಹತ್ತಿರ ಓಡಿ ನೋಡಿಕೊಂಡು ಬಂದು ಸಾಕಾಗಿತ್ತು. ಕೊನೆಗ 5 ಗಂಟೆಗೆ ಭುರ್‌ ಎಂದ ಕಾರಿನ ಶಬ್ದ ಕಿವಿಗೆ ಬಿದ್ದಾಗ, ಗೇಟಿನ ಹತ್ತಿರ ಹೋಗಿ “ಓ ಅವರೇ..’ ಎಂದು ನಿಶ್ಚಯಿಸಿ ಸುದ್ದಿ ತಲುಪಿಸಲು ಅಕ್ಕನ ರೂಮಿನ ಕಡೆ ಓಡಿದೆ.
ಕಾಫಿ ಡಿಕಾಕ್ಷನ್‌ ಹಾಕಿ ಹೊರಬಂದ ಅಮ್ಮ, ಅಪ್ಪನ ಜೊತೆ ಸೇರಿ- “ಬನ್ನಿ ಬನ್ನಿ’ ಎನ್ನುತ್ತಾ ಗೇಟಿನ ಬಳಿ ಧಾವಿಸಿದರು. ಮದುವೆ ಗಂಡು, ಅವನ ಅಪ್ಪ-ಅಮ್ಮ, ಅವರ ಮನೆ ಪುರೋಹಿತರು, ಜೊತೆಗೆ ಹುಡುಗನ ಇಬ್ಬರು ಮಾವಂದಿರ ಗುಂಪು ಒಳಬಂದು ಸೋಫಾದ ಮೋಲೆ ವಿರಾಜಮಾನವಾಯಿತು.

“ಬೇಗ ಬೇಗ ಹುಡುಗೀನ ಕರೆಸಿ, ಬೇರೆ ಇನ್ನೊಂದೆರಡು ಕಡೆ ಹೋಗಬೇಕು’- ಎಂದು ಅವಸರಿಸಿದ ಪುರೋಹಿತರ ಮಾತಿಗೆ ತಲೆಯಾಡಿಸಿದ ಅಪ್ಪ, ಅಮ್ಮನಿಗೆ ಸನ್ನೆ ಮಾಡಿದರು. ರೂಮಿನಿಂದ ಅಕ್ಕ ಬಲು ಮೆಲ್ಲಗೆ ಹೆಜ್ಜೆ ಇಡುತ್ತಾ ಹೊರಬಂದು, ಎದುರಿಗೆ ಹಾಸಿದ್ದ ಚಾಪೆ ಮೇಲೆ ಕುಳಿತಳು. ನಾಚಿಕೆಯಿಂದ ತಲೆ ಮೇಲೆತ್ತಿ ನೋಡಲೂ ಕಷ್ಟವಾಗಿ ಹಣೆ ಮೇಲೆ ಮೂಡಿದ್ದ ಬೆವರನ್ನು ಕರ್ಚಿಫ್ ತುದಿಯಲ್ಲಿ ಒರೆಸಿಕೊಳ್ಳುತ್ತಾ ಇದ್ದಳು. ಹುಡುಗನ ಅಮ್ಮ ಏನೋ ಮಾತಾಡಿಸಿದರೆಂಬ ನೆನಪು.
ಅವಳು ಉತ್ತರ ಕೊಡುವ ಮುಂಚೆಯೇ ಶ್ಯಾವಿಗೆ ಬಾತು, ಕೇಸರಿಬಾತಿನ ತಟ್ಟೆಗಳು ಟೀಪಾಯಿಯ ಮೇಲೆ ಬಂದು ಕುಳಿತು ಸಂಭಾಷಣೆಗೆ ತಡೆಯಾದವು. ತಿಂಡಿಯ ಘಮಲು ಮನೆಯ ತುಂಬೆಲ್ಲಾ ಹರಡಿತು. “ಪಾಪ, ಹುಡುಗಿಗೆ ಸಂಕೋಚವೇನೋ, ಇರಲಿ ಬಿಡೆ’ ಎಂದರು ಹುಡುಗನ ಅಪ್ಪ, ಕೇಸರಿಬಾತಿನ ಗೋಡಂಬಿ ಒಳನೂಕುತ್ತಾ. ಅವರ ಮಾತನ್ನು ಅನುಮೋದಿಸಿ ಹುಡುಗನ ತಾಯಿ “ಹೂಂ, ಆಗಲಿಂದ ನೋಡಿದ್ನಲ್ಲಾ, ಏನು ನಯ, ಏನು ವಿನಯ! ತಲೆ ಎತ್ತಿ ನೋಡಲೇ ಇಲ್ಲ! ಇದಲ್ಲವೇ ಸಂಸ್ಕಾರ…’ ಮಾತು ಮುಗಿಸೋ ಮುನ್ನವೇ ಗೇಟಿನ ಹತ್ತಿರ ಸುಬ್ಬಮ್ಮತ್ತೆ, “ನಲ್ಲೀಲಿ ನೀರು ಬಂತೂ, ನಿಮ್ಮದೇ ಫ‌ಸ್ಟೂ, ಕೊಡ ಎತ್ಕೊಂಡು ಬಾರೆ ನಳಿನಿ…’ ಎಂದು ಜೋರಾಗಿ ಕಿರುಚಿದರು. ಎರಡೇ ನಿಮಿಷದಲ್ಲಿ ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು ಆಚೆ ಓಡಿಯೇಬಿಟ್ಟಳು.
ಬೀದಿ ಕೊನೆಯಲ್ಲಿದ್ದ ನಲ್ಲಿಯಿಂದ ಬೇಗ ಬೇಗ 25-26 ಕೊಡ ಅಡುಗೆಮನೆ, ಸ್ನಾನದ ಮನೆ, ಆಚೆಯಿದ್ದ ತೊಟ್ಟಿ ತುಂಬಿಸಿಯೇಬಿಟ್ಟಳು. ಅಮ್ಮ ಗಾಬರಿಯಿಂದ, “ಗಂಡಿನವರು ಕುಳಿತಿದ್ದಾರೆ ಬಾರೇ…’ಎಂದು ಎಷ್ಟು ಹೇಳಿದರೂ ಕೇಳದೆ, “ಗಂಡಿಗೇನಮ್ಮಾ, ಈ ಗಂಡು ಹೋದರೆ ಇನ್ನೊಂದು ಸಿಗಬಹುದು, ನಾನು ಬೇಗ ಬೇಗ ನೀರು ಹಿಡಿಯದಿದ್ದರೆ ಮುಂದಿನ ವಾರದವರೆಗೆ ಹನಿ ನೀರು ಸಿಗೋದಿಲ್ಲ..’
ಅಂದುಬಿಡೋದೇ!

ಆಗ ನಾವಿದ್ದ ಬಡಾವಣೆಯಲ್ಲಿ ನೀರಿಗೆ ತುಂಬಾ ಕಷ್ಟವಿತ್ತು. 50 ಮನೆಗಳಿಗೆ ಇದ್ದುದು ಒಂದೇ ಕೊಳಾಯಿ. ಸರದಿ ಪ್ರಕಾರ ನೀರು ಹಿಡಿದುಕೊಳ್ಳುವ ಅಭ್ಯಾಸ. ಅಕ್ಕ ಹಾಗಂದರೂ, ನಮ್ಮ ಕಷ್ಟ ಅರ್ಥ ಮಾಡಿಕೊಂಡು ಇಂತಹ ದಾಷ್ಟೀಕದ ಹುಡುಗಿಯೇ ನಮಗೆ ಬೇಕಿತ್ತೆಂದು, ತಿಂಗಳೊಪ್ಪತ್ತಿನಲ್ಲಿ ಮದುವೆ ಮುಗಿಸಿಯೇಬಿಟ್ಟರು. ವರ್ಷಗಳ ನಂತರ ಈಗಲೂ ಆ ಪ್ರಹಸನ ನೆನಪು ಮಾಡಿಕೊಂಡು ನಗುತ್ತಿರುತ್ತಾರೆ ಭಾವ.

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ [email protected]ಗೆ ಬರೆದು ಕಳಿಸಿ.)

-ಜಲಜಾ ರಾವ್‌

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.