ಅನುಷ್ಕಾ ಸಂಭಾವನೆ
Team Udayavani, Feb 28, 2020, 4:33 AM IST
ಸಾಮಾನ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ನ ಸ್ಟಾರ್ ನಾಯಕ, ನಾಯಕಿಯರು, ನಿರ್ದೇಶಕರು ಹೆಚ್ಚು ಸಂಭಾವನೆ ಪಡೆಯುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಲ್ಲೊಬ್ಬ ದಕ್ಷಿಣ ಭಾರತದ ನಾಯಕ ನಟಿ, ತಾನೂ ಯಾವ ಬಾಲಿವುಡ್ ಸ್ಟಾರ್ ಹೀರೋಯಿನ್ಸ್ಗೂ ಕಮ್ಮಿಯಿಲ್ಲ ಎನ್ನುವಂತೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇದ್ದುಕೊಂಡೇ, ಬಾಲಿವುಡ್ನ ಸ್ಟಾರ್ ಹೀರೋಯಿನ್ಸ್ ಪಡೆಯುವಷ್ಟು ಸಂಭಾವನೆ ಪಡೆದುಕೊಂಡು, ಸದ್ಯ ಬಾಲಿವುಡ್ ಅಂಗಳದಲ್ಲೂ ಸುದ್ದಿಯಾಗುತ್ತಿದ್ದಾರೆ. ಆ ನಟಿಯೇ ಅನುಷ್ಕಾ ಶೆಟ್ಟಿ.
ಹೌದು, ಬಾಹುಬಲಿ ಚಿತ್ರದ ನಂತರ ಅನುಷ್ಕಾ ಶೆಟ್ಟಿ ಸಂಭಾವನೆಯಲ್ಲಿ ವಿಪರೀತ ಏರಿಕೆಯಾಗಿದೆ. “ಬಾಹುಬಲಿ’ ಸರಣಿಯ ಎರಡು ಚಿತ್ರಗಳು ಬಿಡುಗಡೆಯಾದ ನಂತರ ಅನುಷ್ಕಾ ಶೆಟ್ಟಿ ಅಭಿಮಾನಿಗಳ ಸಂಖ್ಯೆ ಕೂಡ ದುಪ್ಪಟ್ಟಾಗಿದೆ. ಅನುಷ್ಕಾ ಶೆಟ್ಟಿ ಕಾಲ್ಶೀಟ್ಗಾಗಿ ಹತ್ತಾರು ನಿರ್ಮಾಪಕರು, ನಿರ್ದೇಶಕರು ಕಾದು ಕುಳಿತಿದ್ದರೂ, ಅನುಷ್ಕಾ ಡೇಟ್ಸ್ ಸಿಗುತ್ತಿಲ್ಲ ಅನ್ನೋದು ತೆಲುಗು ಚಿತ್ರರಂಗದ ಮಂದಿಯ ಮಾತು.
ಬಾಹುಬಲಿಯಂತಹ ದೊಡ್ಡ ಯಶಸ್ಸು ಅವರ ಬೆನ್ನಿಗಿದ್ದರೂ, ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದ ಅನುಷ್ಕಾ ಆಮೇಲೆ ಒಪ್ಪಿಕೊಂಡಿದ್ದ ಚಿತ್ರ ನಿಶ್ಯಬ್ದಂ. ಆ ಚಿತ್ರದಲ್ಲಿ ಕೂಡ ಅನುಷ್ಕಾ ಅವರದ್ದು ಮೂಗಿಯ ಪಾತ್ರ. ಇಡೀ ಸಿನಿಮಾದಲ್ಲಿ ಅನುಷ್ಕಾ ಎಲ್ಲೂ ಮಾತನಾಡುವುದಿಲ್ಲ. ಹೀಗಿದ್ದರೂ, ಅಚ್ಚರಿ ಎಂದರೆ, ಆ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಪಡೆದ ಸಂಭಾವನೆ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ತೆಲುಗು, ಹಿಂದಿ, ತಮಿಳು, ಇಂಗ್ಲಿಷ್ ಹೀಗೆ ಬಹುಭಾಷೆಯಲ್ಲಿ ನಿರ್ಮಾಣಗೊಂಡಿರುವ ನಿಶ್ಯಬ್ದಂ ಚಿತ್ರದಲ್ಲಿ ನಟಿಸೋದಕ್ಕೆ ಅನುಷ್ಕಾ ಪಡೆದಿರುವುದು ಬರೋಬ್ಬರಿ 2.5 ಕೋಟಿ ರೂ.ಗಳಂತೆ. ಜಿಎಸ್ಟಿ ಹೊರತುಪಡಿಸಿ ಅನುಷ್ಕಾ ಶೆಟ್ಟಿ ಇಷ್ಟೊಂದು ದೊಡ್ಡ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಇನ್ನೊಂದು ವಿಷಯವೆಂದರೆ, ಹಿಂದಿಯ ಕೆಲವೇ ಕೆಲವು ನಾಯಕ ನಟಿಯರನ್ನು ಹೊರತುಪಡಿಸಿದರೆ, ಇಲ್ಲಿಯವರೆಗೆ ತೆಲುಗು, ತಮಿಳು, ಕನ್ನಡ, ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತದ ಯಾವುದೇ ನಾಯಕ ನಟಿ ಈ ಪ್ರಮಾಣದ ಸಂಭಾವನೆ ಪಡೆದಿಲ್ಲ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.
ಅಂದ ಹಾಗೆ, ಈಗಾಗಲೇ ನಿಶ್ಯಬ್ದಂ ಚಿತ್ರದ ಸಂಪೂರ್ಣ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ. ಇದೇ ಏಪ್ರಿಲ್ 2ರಂದು ಈ ಚಿತ್ರ ವಿಶ್ವದಾದ್ಯಂತ ಏಕಕಾಲಕ್ಕೆ ಎರಡು ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗುತ್ತಿದೆ. ಮಾಧವನ್, ಮೈಕೆಲ್ ಮ್ಯಾಡ್ಸೆನ್, ಅಂಜಲಿ, ಸುಬ್ಬರಾಜು, ಶಾಲಿನಿ ಪಾಂಡೆ ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ಹೇಮಂತ್ ಮಧುಕರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ