ಕಾಲೇಜು ಪ್ರಾರಂಭವಾದರೂ ಉದ್ಯೋಗವಿಲ್ಲ, ವೇತನವೂ ಇಲ್ಲ


Team Udayavani, Jun 29, 2017, 3:45 AM IST

Guest-Lecturer-28-6.jpg

ಮಂಗಳೂರು ವಿಶ್ವವಿದ್ಯಾನಿಲಯ ಸೇರಿ ರಾಜ್ಯದಾದ್ಯಂತ ಹಲವು ವಿ.ನಿ. ವ್ಯಾಪ್ತಿಯ ಕಾಲೇಜುಗಳು ಪ್ರಾರಂಭವಾಗಿದ್ದು, ಅತಿಥಿ ಉಪನ್ಯಾಸಕರಿಗೆ ಕರ್ತವ್ಯಕ್ಕೆ ಸೇರಲು ಆದೇಶ ದೊರೆಯದೆ ಕಂಗಾಲಾಗಿದ್ದಾರೆ. ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರು ಸದನದಲ್ಲಿ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದಿದ್ದರು. ಇದಕ್ಕೆ ಉತ್ತರಿಸಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ‘ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಪ್ರಾರಂಭದ ಹಂತದಲ್ಲೇ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಿ ಕಾಲೇಜುಗಳಿಗೆ ಪೋಸ್ಟಿಂಗ್‌ ನೀಡುತ್ತೇವೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಉತ್ತರಿಸಿದ್ದಾರೆ.

ಮಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಪ್ರಾರಂಭವಾಗಿ ದಿನಗಳು ಕಳೆದಿದ್ದರೂ, ಗುತ್ತಿಗೆ ಆಧಾರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಆದೇಶ ಬಂದಿಲ್ಲ. ಹೀಗಾಗಿ, ರಾಜ್ಯದಲ್ಲಿರುವ ಸುಮಾರು 14,635ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ನೌಕರಿಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 2,100 ಖಾಯಂ ಉಪನ್ಯಾಸಕರನ್ನು ಈಗಾಗಲೇ ನೇಮಿಸಿದ್ದು, ಅವರೆಲ್ಲ ವಾರದಲ್ಲಿ 16 ಗಂಟೆ ಪಾಠ ಮಾಡಬೇಕು. ಇದರಿಂದ ಎರಡು ಅತಿಥಿ ಉಪನ್ಯಾಸಕ ಕೆಲಸ ಕೈತಪ್ಪಿ ಹೋಗಿದ್ದು, ಆ ಮೂಲಕ ಸುಮಾರು 4,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಹುದ್ದೆಗೆ ಕತ್ತರಿ ಬಿದ್ದಿದೆ. 

ಸುಮಾರು 20 ದಿನಗಳ ಹಿಂದೆಯಷ್ಟೇ ಪ್ರೊ | ಬರಗೂರು ರಾಮಚಂದ್ರ ಅವರು ಉನ್ನತ ಶಿಕ್ಷಣ ಸಚಿವರ ಬಳಿ ಅತಿಥಿ ಉಪನ್ಯಾಸಕರ ಸಮಸ್ಯೆ ಹಾಗೂ ಕೆಲವು ಸಲಹೆಗಳನ್ನು ಮುಂದಿಟ್ಟಾಗ ಸದ್ಯ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರ‌ನ್ನೇ ಮುಂದುವರಿಸುವ ಆಶ್ವಾಸನೆ ನೀಡಿದ್ದರು. ಖಾಯಂ ಉಪನ್ಯಾಸಕರ ನೇಮಕದಿಂದ ಸುಮಾರು 2,000 ಮಂದಿ ಉದ್ಯೋಗ ಕಳೆದುಕೊಳ್ಳಲಿರುವುದು ನಿಜ. ಆದರೆ, ಕೆಲವು ಕಾಲೇಜುಗಳಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ; ಮತ್ತೆ ಕೆಲವೆಡೆ ಉಪನ್ಯಾಸಕರು ನಿವೃತ್ತಿ ಹೊಂದಲಿದ್ದಾರೆ. ಇಂಥ ಜಾಗಗಳಲ್ಲಿ ಅತಿಥಿ ಉಪನ್ಯಾಸಕರ ಅಗತ್ಯತೆ ಬೀಳಬಹುದು ಎನ್ನುವುದು ಕಾಲೇಜು ಶಿಕ್ಷಣ ಇಲಾಖೆಯ ಸಮಜಾಯಿಷಿ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷ ಬೆಂಬಲವೇ?
ಸಾಮಾನ್ಯವಾಗಿ, ಕಾಲೇಜು ಪ್ರಾರಂಭವಾಗುವಾಗಲೇ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಇಲಾಖೆಯಿಂದ ಆದೇಶ ಪ್ರತಿ ರವಾನೆಯಾದರೂ, ಒಂದು ತಿಂಗಳ ನಂತರ ಆದೇಶ ಪ್ರತಿ ಕೈ ಸೇರುತ್ತದೆೆ. ಇನ್ನು, ಕೆಲವು ಕಡೆ ಅತಿಥಿ ಉಪನ್ಯಾಸಕರು ಕಾಲೇಜು ಪ್ರಾಂಶುಪಾಲರ ಒತ್ತಾಯಕ್ಕೆ, ಇನ್ನೂ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಆದೇಶ ಕೈಸೇರುವುದಕ್ಕೂ ಮೊದಲೇ ಕೆಲಸಕ್ಕೆ ಹಾಜರಾಗುತ್ತಾರೆೆ. ಆದರೆ, ವೇತನ ದೊರೆಯುವುದು ಆದೇಶ ಪ್ರತಿ ಕೈಸೇರಿದ ಬಳಿಕ. ಹೀಗಾಗಿ, ಅನೇಕ ಉಪನ್ಯಾಸಕರು ಸಂಬಳವಿಲ್ಲದೆ ಕೆಲಸ ಮಾಡುವ ಅನಿವಾರ್ಯತೆಯೂ ಇದೆ. ಗಮನಾರ್ಹವೆಂದರೆ, ರಾಜ್ಯದಲ್ಲಿ 17 ವಿವಿಗಳಿದ್ದು, ಯಾವ ವಿವಿ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಆದೇಶ ಪ್ರತಿ ದೊರಕಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾನ್ಪಡೆ ತಿಳಿಸಿದ್ದಾರೆ.

ವಿ.ವಿ.ಯಲ್ಲೂ ಅದೇ ಸಮಸ್ಯೆ
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಒಟ್ಟು 19 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಸುಮಾರು 641 ಅತಿಥಿ ಉಪನ್ಯಾಸಕರು ಈ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2013ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಲಾಗುತ್ತಿದೆ. ಮಂಗಳೂರು ವಿ.ವಿ. ವ್ಯಾಪ್ತಿ ಕಾಲೇಜುಗಳು ಜೂ.12ರಂದು ಪ್ರಾರಂಭಗೊಂಡಿದ್ದರೂ, ಅತಿಥಿ ಉಪನ್ಯಾಸಕರಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಈವರೆಗೆ ಆದೇಶ ಬಂದಿಲ್ಲ. ಇನ್ನೊಂದೆಡೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡಿದ್ದ ಅತಿಥಿ ಉಪನ್ಯಾಸಕರಿಗೆ ಇನ್ನೂ ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳ ವೇತನವನ್ನು ನೀಡಿಲ್ಲ. ಈ ಹಿಂದೆ ಅತಿಥಿ ಉಪನ್ಯಾಸಕರಿಗೆ ಸರಕಾರದ ಖಜಾನೆ 1ರ ಮೂಲಕ ವೇತನ ಬಿಡುಗಡೆಯಾಗುತ್ತಿತ್ತು. ಆದರೆ, ಸರಕಾರ ಖಜಾನೆ 2ರ ಮೂಲಕ ವ್ಯವಸ್ಥೆ ಮಾಡಿದ ಬಳಿಕವೂ ವೇತನ ಸಮಸ್ಯೆ ಪ್ರತೀ ವರ್ಷದಂತೆ ಈ ವರ್ಷವೂ ತಪ್ಪಿಲ್ಲ ಎಂದು ಅತಿಥಿ ಉಪನ್ಯಾಕರ ಸಂಘದ ಮಂಗಳೂರು ವಲಯಾಧ್ಯಕ್ಷ ಬಾಲಚಂದ್ರ ಹಾಗೂ ಕಾರ್ಯದರ್ಶಿ ಧೀರಜ್‌ ತಿಳಿಸಿದ್ದಾರೆ. 

‘ಕೆಲಸ ಮುಂದುವರಿಸಲು ಆದೇಶ ಬರದ ಕಾರಣ ಅತಿಥಿ ಉಪನ್ಯಾಸಕರು ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದಾರೆ. ಅತಿಥಿ ಉಪನ್ಯಾಸಕರು ನೆಟ್‌ ಅಥವಾ ಕೆ-ಸೆಟ್‌ ಪಾಸ್‌ ಆಗಿರಬೇಕು ಎಂಬ ನಿಯಮವೊಡ್ಡಿ ಕೆಲಸ ಕಳೆದುಕೊಳ್ಳುವಂತೆ ಮಾಡುವುದು ಸರಿಯಲ್ಲ. ಸರಕಾರ ಖಾಯಂ ಉಪನ್ಯಾಸಕರನ್ನು ನೇಮಿಸುವುದರಿಂದ ಅದರ ಎರಡು ಪಟ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರ ಪ್ರತಿ ಬಾರಿ ಕರ್ತವ್ಯಕ್ಕೆ ಸೇರ್ಪಡೆಯಾಗಲು ದೊರೆಯುವ ಆದೇಶ ಹಾಗೂ ವೇತನ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು’
– ಲೋಕೇಶ್‌ ಸೇಡಿಯಾಪು, ರಾಜ್ಯ ಕಾರ್ಯದರ್ಶಿ, ಅತಿಥಿ ಉಪನ್ಯಾಕರ ಸಂಘ

ಉಪನ್ಯಾಸಕರು ಆತಂಕ ಪಡಬೇಕಾಗಿಲ್ಲ
‘ಕಾಲೇಜು ಪ್ರಾರಂಭವಾಗಿದ್ದು, ಅತಿಥಿ ಉಪನ್ಯಾಸಕರಲ್ಲಿ ಶೇ.60-70 ಮಂದಿ ಸೇವೆಯಲ್ಲಿ ಮುಂದುವರಿಯುತ್ತಾರೆೆ. ಉಳಿದವರಿಗೆ ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿಯೇ ಅವಕಾಶ ದೊರೆಯುತ್ತದೆ ಎನ್ನಲು ಸಾಧ್ಯವಿಲ್ಲ. ಇದರಿಂದಾಗಿ, ಪುತ್ತೂರಿನಲ್ಲಿದ್ದವರು ಕೂಡ ಮಂಗಳೂರಿಗೆ ಹೋಗಬೇಕಾಗಬಹುದು. ಪ್ರಸ್ತುತ ವಿಶ್ವವಿದ್ಯಾನಿಲಯದ ಕ್ಯಾಲೆಂಡರ್‌ ಪ್ರಕಾರ ಯಾವುದೇ ಕಾಲೇಜಿನಲ್ಲಿ ಉಳಿಯುವವರಿಗೆ 11,000 ರೂ. ತಿಂಗಳಿಗೆ ದೊರೆಯುತ್ತದೆ. ಉಳಿದವರಿಗೆ ಸಿಡಿಸಿ ನಿಯಮದ ಪ್ರಕಾರ, ಕನಿಷ್ಠ 4,000ರೂ. ದೊರೆಯುತ್ತದೆ. ಹೀಗಾಗಿ, ಅತಿಥಿ ಉಪನ್ಯಾಸಕರು ಆತಂಕಪಡುವ ಅಗತ್ಯವಿಲ್ಲ’.
– ಉದಯಶಂಕರ್‌, ಶಿಕ್ಷಣ ಇಲಾಖೆ, ಜಂಟಿ ನಿರ್ದೇಶಕರು ಮಂಗಳೂರು ವಿಭಾಗ

– ಭರತ್‌ರಾಜ್‌ ಕಲ್ಲಡ್ಕ

ಟಾಪ್ ನ್ಯೂಸ್

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

bjp-jdsವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

1-24-sunday

Daily Horoscope: ವ್ಯವಹಾರಸ್ಥರಿಗೆ ಅನಿರೀಕ್ಷಿತ ಮೂಲದಿಂದ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

beಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

SUNಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

ಕನ್ನಡ ಜಾನಪದ ಚಿತ್ರಕ್ಕೆ ಲಾ ಸಿನೆಫ್ ಗೌರವ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Malpe ಪುನರುಜ್ಜೀವನಕ್ಕಾಗಿ ಕಾಯುತ್ತಿದೆ ತೊಟ್ಟಂ ಕುಮೆ ಕೆರೆ

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

Pune-Bangalore ಹೊಸ ಹೆದ್ದಾರಿಗೆ ಚಾಲನೆ ನೀಡಲು ಸಿದ್ಧತೆ

bjp-jdsವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.