ಘಂಟೆಯ ಕೊರಳೊಳಗಿಂದ…


Team Udayavani, Oct 20, 2018, 2:24 PM IST

25663.jpg

 ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಘಂಟೆ. ಇದೇ ಗಂಟಾನಾದದ ಮಹತ್ವ…

ನಾವು ಯಾವುದೇ ದೇವಾಲಯಕ್ಕೆ ಹೋದರೂ ಬೇರೆಬೇರೆ ಗಾತ್ರದ, ಬಗೆಬಗೆಯ ಆಕೃತಿಯ ಘಂಟೆಗಳು ತೂಗಿಹಾಕಿರುವುದನ್ನು ಕಾಣುತ್ತೇವೆ. ಅಲ್ಲದೇ, ನಮಗೆ ಅರಿವಿ¨ªೋ ಅರಿವಿಲ್ಲದೆಯೋ ಅವುಗಳಲ್ಲಿ ಒಂದು ಘಂಟೆಯನ್ನು ಬಾರಿಸಿ ದೇವರಿಗೆ ನಮಸ್ಕರಿಸುತ್ತೇವೆ. ಇನ್ನು ಕೆಲವರು ದೇಗುಲದಲ್ಲಿ ಮೌನವನ್ನು ಬಯಸುವುದುಂಟು. ಬಂದವರೆಲ್ಲರೂ ಘಂಟೆಯನ್ನು ಬಾರಿಸುತ್ತ ಶಬ್ದಮಾಲಿನ್ಯವನ್ನು ಮಾಡುತ್ತಾರಲ್ಲ ಎಂದು ಅವರಿಗೆ ಅನ್ನಿಸಬಹುದು. ಅದು ತಪ್ಪೇನೂ ಅಲ್ಲ. ಯಾಕೆಂದರೆ, ಕೈಗೆ ಘಂಟೆ ಸಿಕ್ಕಿತೆಂದರೆ ಅದನ್ನು ಐದಾರು ಬಾರಿ ಬಾರಿಸಿ ಗಲಾಟೆ ಎಬ್ಬಿಸುವವರನ್ನು ನಾವೆಲ್ಲರೂ ನೋಡಿರುತ್ತೇವೆ. ಘಂಟೆ ಬಾರಿಸುವ ಕ್ರಮ ಮತ್ತು ಅದರ ಅಗತ್ಯವನ್ನು ತಿಳಿಯದೇ ಇ¨ªಾಗ ಘಂಟೆಯ ಶಬ್ದಗಳು ದೇವರಲ್ಲಿ ಭಕ್ತಿ ಹುಟ್ಟಿಸುವ ಬದಲು ಶಬ್ದಮಾಲಿನ್ಯವನ್ನೇ ಉಂಟುಮಾಡುತ್ತವೆ.

  ಮಂಗಳಾರತಿಯ ಸಂದರ್ಭವನ್ನು ಹೊರತುಪಡಿಸಿ, ನಾವು ನಮಸ್ಕರಿಸುವ ಮೊದಲು ಘಂಟೆಯನ್ನು ಕೇವಲ ಒಂದು ಬಾರಿ ಮಾತ್ರ ಬಾರಿಸಬೇಕು. ಇದು ಕ್ರಮ. ಆದರೆ, ಮನಬಂದಂತೆ ಮೂರೋ- ನಾಲ್ಕೋ ಅಥವಾ ಅದಕ್ಕೋ ಹೆಚ್ಚು ಬಾರಿ “ಢಣ್‌ ಢಣ್‌ ಢಣ್‌ ಢಣ್‌ ಢಣ್‌’ ಎಂದು ಬಾರಿಸುತ್ತ ಹೋದರೆ ಅದು ದೇಗುಲದ ಮೌನವನ್ನು ಹಾಳು ಮಾಡಿದಂತೆಯೇ ಸರಿ. ಹಾಗಾಗಿ, ಒಮ್ಮೆ ಮಾತ್ರ ಬಾರಿಸುವುದು ಸೂಕ್ತ.

ಘಂಟೆ ಬಾರಿಸಲೂ ಒಂದು ಕಾರಣ…
 ಯಾಕೆ ಒಮ್ಮೆ ಮಾತ್ರ ಬಾರಿಸಬೇಕು? “ಅದು ನನ್ನಿಷ್ಟ, ಎಷ್ಟು ಬಾರಿಯಾದರೂ ಘಂಟೆಯನ್ನು ಬಾರಿಸುತ್ತೇನೆ’ ಎಂದು ಸಮರ್ಥನೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ, ಗಂಟಾನಾದದ ಹಿಂದೆ ಒಂದು ವಿಶೇಷ ಮಹತ್ವವಿದೆ. ನಾವು ಒಮ್ಮೆ ಬಾರಿಸಿದ ಘಂಟೆಯ ಶಬ್ದ ಸಣ್ಣದಾಗುತ್ತ ಹೋಗಿ ಕೊನೆಗೊಳ್ಳುತ್ತದೆ. ಅದು ಅರ್ಧದಿಂದ ಒಂದು ನಿಮಿಷಗಳ ಕಾಲಾವಧಿಯೂ ಇರಬಹುದು. ಇದು ಘಂಟೆಯ ಗಾತ್ರ ಹಾಗೂ ಬಾರಿಸಿದ ರೀತಿಯನ್ನು ಅವಲಂಬಿಸಿದೆ. ಸಣ್ಣದಾಗಿ ಬಾರಿಸಿದಾಗ ಕಡಿಮೆ ಅವಧಿಯಲ್ಲಿಯೂ ದೊಡ್ಡದಾಗಿ ಅಥವಾ ಗಟ್ಟಿಯಾಗಿ ಬಾರಿಸಿದಾಗ ದೀರ್ಘಾವಧಿಯಲ್ಲಿಯೂ ಅದರ ಶಬ್ದ ಕ್ಷೀಣಿಸುತ್ತ ಹೋಗಿ ಮರೆಯಾಗುತ್ತದೆ. ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ.

ಏಕಾಗ್ರತೆಯೇ ದೇವರು
  ನಾವು ದೇಗುಲಕ್ಕೆ ಹೋಗುವ ಮೊದಲ ಕಾರಣವೇ ಮಾನಸಿಕ ನೆಮ್ಮದಿಗಾಗಿ. ಬದುಕಿನ ಜಂಜಾಟದಿಂದಾಗಿ ತಲೆಯಲ್ಲಿ ಓಡಾಡುವ ಚಿಂತೆಗಳನ್ನು ಇಟ್ಟುಕೊಂಡು ದೇಗುಲಕ್ಕೆ ಹೋಗಿ ನಮಸ್ಕರಿಸುವಾಗಲೂ ನಮ್ಮ ತಲೆಯಲ್ಲಿ ಯಾವುದೋ ಆಲೋಚನೆಗಳು ಓಡಾಡುವ ಸಾಧ್ಯತೆಗಳಿವೆ. ಅಲ್ಲದೇ, ನಮ್ಮ ಚಿತ್ತ ದೇವಾಲಯದಲ್ಲಿನ ಆಗುಹೋಗುಗಳ ಕಡೆಗೆ ಗಮನಕೊಡುವ ಸಾಧ್ಯತೆಯೂ ಇದೆ. ಆದುದರಿಂದಲೇ ನಾವು ದೇವಾಲಯಕ್ಕೆ ಕಾಲಿಟ್ಟ ತಕ್ಷಣ ಅಥವಾ ನಮಸ್ಕರಿಸುವ ಮೊದಲು ಘಂಟೆಯನ್ನು ಬಾರಿಸುತ್ತೇವೆ. ಆ ಘಂಟೆ “ನೀನೀಗ ದೇಗುಲದಲ್ಲಿದ್ದೀಯ, ಮನದಲ್ಲಿ ಬೇರೆ ಯಾವುದೇ ಯೋಚನೆಗಳಿಲ್ಲದೇ, ಭೌತಿಕ ಬಾಧೆಗಳನ್ನೂ ಮರೆತು ನಮಸ್ಕರಿಸು’ ಎಂದು ನಮ್ಮನ್ನು ಎಚ್ಚರಿಸುತ್ತದೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಅನುಕೂಲವಾಗುವುದೇ ಈ ಘಂಟೆ. ಇದೇ ಗಂಟಾನಾದದ ಮಹತ್ವ.

ಏಕಾಗ್ರತೆಯೂ ಒಂದು ಸಾಧನೆ. ಈ ಘಂಟೆ ಆ ಕ್ಷಣದ ಏಕಾಗ್ರತೆಯ ಮಾರ್ಗ. ಏಕಾಗ್ರತೆ ಮನುಷ್ಯನ ಶಕ್ತಿಯೂ ಹೌದು; ಭಕ್ತಿಯೂ ಹೌದು.

ಘಂಟೆಯ 6 ತತ್ವಗಳು
1. ಘಂಟೆಯನ್ನು ಒಮ್ಮೆ ಮಾತ್ರ ಬಾರಿಸಬೇಕು. 
2. ಆ ಘಂಟೆ ಕೊನೆಯಾಗುವ ತನಕವೂ ಅದರಲ್ಲಿಯೇ ನಿಮ್ಮ ಗಮನವಿರಲಿ. 
3. ಘಂಟಾನಾದದ ದೀರ್ಘ‌ತೆಯು ಬದುಕಿನ ಸುದೀಘತೆಗೆ ಶ್ರುತಿಯಾಗಿ, ಮಾನವ ಜನ್ಮದ ಮೌಲ್ಯದ ಅರಿವಾಗುತ್ತದೆ.
4. ಘಂಟೆಯಿಂದ ಹೊರಡುವ “ಓಂ’ ಎಂಬ ಶಬ್ದವು ಮನಸ್ಸನ್ನು ಭಕ್ತಿ-ಭಾವದಿಂದ ತಾಜಾವಾಗಿಸುತ್ತದೆ.
5. ಘಂಟೆಯ ನಾದದ ಕಡೆಗೇ ಗಮನ ಕೊಟ್ಟರೆ, ಏಕಾಗ್ರತೆಯ ಮಿಂಚೊಂದು ನಿಮ್ಮೊಳಗೆ ಬೆಳಕಾಗುತ್ತದೆ.
6. ಆ ನಾದವು ಮನಸ್ಸನ್ನು ಶುದ್ಧವಾಗಿಸುತ್ತದೆ. ಶುದ್ಧಮನಸ್ಸಿನಿಂದ ನಮಸ್ಕರಿಸಿದರೆ, ದೇವರು ಸಂಪ್ರೀತನಾಗುತ್ತಾನೆ. ನಿಮ್ಮ ಮನಸ್ಸೂ ಉಲ್ಲಸಿತವಾಗುತ್ತದೆ.

ವಿಷ್ಣು ಭಟ್ಟ ಹೊಸ್ಮನೆ 

ಟಾಪ್ ನ್ಯೂಸ್

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.