ರಂಜಿಸಿದ ಕೊಂಕಣಿ ನಾಟಕ ದೇವಾಲೇ ಖೇಳು


Team Udayavani, Feb 7, 2020, 4:00 AM IST

big-23

ಕೊಂಕಣಿ ನಾಟಕಗಳ ಪ್ರಯೋಗವು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಇತ್ತೀಚಿಗೆ ಮಂಗಳೂರಿನಲ್ಲಿ ಪ್ರದರ್ಶನಗೊಂಡ ದೇವಾಲೆ ಖೇಳು ಕಿರು ನಾಟಕ ಆ ಕೊರತೆಯನ್ನು ನೀಗಿಸಲು ಸಫ‌ಲವಾಯಿತು . ಎಂ.ಶಾಂತರಾಮ ಕುಡ್ವರು ರಚಿಸಿದ ಈ ಕಿರು ನಾಟಕವನ್ನು ಜಿ.ಎಸ್‌.ಬಿ.ಮಹಿಳಾ ವೃಂದ ಮಂಗಳೂರು ಇದರ ಸದಸ್ಯರು ಅಭಿನಯಿಸಿದರು .

ದೇವು ಹಾಗೂ ವಿನುತಾ ಪರಸ್ಪರ ಪ್ರೇಮಿಸುತ್ತಾರೆ . ಆದರೆ ಹೆತ್ತವರು ತಾವು ಹೇಳಿದ ನೆಂಟಸ್ತಿಕೆಯೇ ಆಗಬೇಕೆಂದು ಇವರ ಪ್ರೇಮಕ್ಕೆ ತಣ್ಣೀರೆರಚುತ್ತಾರೆ. ಯುವ ಪ್ರೇಮಿಗಳು ಆ ನೆಂಟಸ್ತಿಕೆ ತಪ್ಪಿಸಲು ಉಪಾಯ ಹೂಡುತ್ತಾರೆ. ವಿನುತಾಳು ತನ್ನನ್ನು ನೋಡಲು ಬರುವ ವರನಿಗೆ ಜ್ಯೂಸ್‌ನಲ್ಲಿ ಬೇಧಿಯ ಮಾತ್ರೆ ಹಾಕಿ ಬೇಧಿಯಾಗುವಂತೆ ಮಾಡುವುದು , ದೇವು ಹೆಣ್ಣು ನೋಡುವಾಗ ಫಿಟ್ಸ್‌ ಬಂದಂತೆ ನಟಿಸಿ ಬೀಳುವುದು , ಆ ಮೂಲಕ ವರನ ಆರೋಗ್ಯ ಸರಿಯಲ್ಲ ಎಂದು ಹೆತ್ತವರೇ ನಿರಾಕರಿಸುವಂತೆ ಮಾಡುವುದು ಎಂಬ ಉಪಾಯ ಮಾಡುತ್ತಾರೆ .

ಆದರೆ , ಇಲ್ಲೊಂದು ಅನಿರೀಕ್ಷಿತ ಸನ್ನಿವೇಶ , ನಾಟಕದ ಹೆಸರೇ ಹೇಳುವಂತೆ ದೇವರ ಆಟ ಪ್ರಾರಂಭವಾಗುತ್ತದೆ . ಇಬ್ಬರ ಹೆತ್ತವರೂ ನೋಡಿದ ನೆಂಟಸ್ಥಿಕೆ ದೇವು ವಿನುತಾರೇ ಆಗಿರುತ್ತಾರೆ . ಆದರೆ , ಈ ಸಂದರ್ಭದಲ್ಲಿ ದೇವು ವಿನುತಾರು ಪರಸ್ಪರರನ್ನು ನೋಡಿರದ ಕಾರಣ , ಅವರ ಪೂರ್ವಯೋಜಿತ ಉಪಾಯ ಪ್ರಯೋಗವಾಗುತ್ತದೆ. ದೇವು ತಲೆ ತಿರುಗಿ ಬಿದ್ದಾಗ ವಿನುತಾಳು ದೇವುನನ್ನು ನೋಡಿ , ಹೆದರಿ ತಾವು ಮಾಡಿದ ಉಪಾಯವನ್ನು ಹೇಳುತ್ತಾಳೆ .ದೇವರ ಆಟದಂತೆ ದೇವು ವಿನುತಾರ ಮದುವೆಯಾಗಿ ಸುಖಾಂತವಾಗುತ್ತದೆ .

ಉತ್ತಮ ಕಥೆಯನ್ನು ಹೊಂದಿರುವ ಕಿರು ನಾಟಕ ಸಂಪೂರ್ಣ ಹಾಸ್ಯಮಯ ವಾಗಿದ್ದು , ಪಾತ್ರಧಾರಿಗಳೂ ಚೆನ್ನಾಗಿ ನಿರ್ವಹಿಸಿದರು . ದೇವು ಪಾತ್ರದಲ್ಲಿ ರಾಧಿಕಾ ಕಾಮತ್‌ ಉತ್ತಮವಾಗಿ ಅಭಿನಯಿಸಿದರು . ಕಥಾನಾಯಕನ ಗತ್ತು , ಶೈಲಿ ಎಲ್ಲವೂ ಸಮರ್ಪಕವಾಗಿತ್ತು . ವಿನುತಾಳ ಪಾತ್ರದಲ್ಲಿ ನಯನಾ ರಾವ್‌ ನಾಯಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಚಿತ್ರಿಸಿದರು . ವಿನುತಾಳ ತಂದೆ ರಾಮರಾಯನಾಗಿ ಜಯಂತಿ ನಾಯಕ್‌ , ತಾಯಿ ಸುನಂದಾಳಾಗಿ ಗೀತಾ ಕಾಮತ್‌ ಹೆತ್ತವರ ಕಾಳಜಿ ಹೇಗಿರಬೇಕು ಎಂಬುದರ ಉತ್ತಮ ಚಿತ್ರಣ ನೀಡಿದರು . ದೇವು ತಂದೆ ಶ್ರೀನಿವಾಸನಾಗಿ ಸಬಿತಾ ಕಾ ಮತ್‌ ಮರೋಳಿಯವರು ಮಿಂಚಿದರು . ತಾಯಿ ಕಿವುಡಿ ರಮಾಬಾಯಿ ಯಾಗಿ ವಿಮಲಾ ಕಾಮತ್‌ ಹಾಸ್ಯದ ಕಡಲಲ್ಲಿ ತೇಲಿಸಿದರು . ಕಿವಿ ಸರಿಯಾಗಿ ಕೇಳಿಸದೇ , ಎದುರು ಪಾತ್ರ ಧಾರಿಗಳ ಸಂಭಾಷಣೆಯ ಶಬ್ದಗಳನ್ನು ತಿರುವಿ ಹೇಳಿದ ಕ್ರಮ ನಾಟಕದ ಟ್ರಂಪ್‌ಕಾರ್ಡ್‌ ಆಯಿತು .

ಶ್ರೀನಿವಾಸ – ರಮಾ ಅವರ ಸಂಭಾಷಣೆ ನೈಜ ದಂಪತಿಗಳನ್ನು ನೆನಪಿಸಿತು ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಕಡಿಮೆ ಎಂಬ ಅಭಿಪ್ರಾಯ ಇದೆ . ಆದರೆ ಈ ನಾಟಕದಲ್ಲಿ ಬಳಸಿದ ಕೊಂಕಣಿ ಭಾಷೆಯ ಸೊಗಡು ಆಕರ್ಷಿಸಿತು . ಹಾಸ್ಯದ ಕೆಲವೊಂದು “ಪಂಚಿಂಗ್‌ ಡೈಲಾಗ್‌’ಗಳಿಗೆ ಕರತಾಡನ ಸಾಕ್ಷಿಯಾಯಿತು . ನಾಟಕದಲ್ಲಿ ಹಾಡುಗಳೇ ಇರದಿರುವುದು ಕೊರತೆಯಾಗಿ ಕಂಡಿತು.

ಎಂ.ಗಿರಿಧರ ಪಿ.ನಾಯಕ್‌

ಟಾಪ್ ನ್ಯೂಸ್

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

Dharmasthala: ಸರಣಿ ಅಪಘಾತ; 5 ವಾಹನಗಳಿಗೆ ಹಾನಿ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Rahul Gandhi 3

Rahul Gandhiವಿರುದ್ಧ ಶಿಕ್ಷಣ ತಜ್ಞರು, ಕುಲಪತಿಗಳು ಗರಂ

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

1-jaaa

Jet Airways ನರೇಶ್‌ ಗೋಯಲ್‌ಗೆ ಮಧ್ಯಾಂತರ ಜಾಮೀನು

rain 21

ಭೀಕರ ಮಳೆಗೆ ತತ್ತರಿಸಿದ ಮಣಿಪುರ, ಮೇಘಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.