ನಿನ್ನ ದನಿಗಾಗಿ, ನಿನ್ನ ಕರೆಗಾಗಿ, ನಿನ್ನ ಸಲುವಾಗಿ ಕಾಯುವೆ


Team Udayavani, Feb 25, 2020, 5:08 AM IST

majji-14

ಈಗ ರಜೆಗೆಂದು ಊರಿಗೆ ಹೋದವಳು ನನ್ನನ್ನು ಮರೆತೆಯಾ? ನೀನು ಆಡಿದ ಮಾತುಗಳನ್ನೆ ಮರೆತೆಯಾ? ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದೆಯಾ? ಅಪ್ಪ -ಅಮ್ಮನ ಕಟ್ಟಳೆಯಲ್ಲಿರುವ ಕಾರಣದಿಂದ ಫೋನ್‌ ಮಾಡದೆ, ಮೆಸೇಜ್‌ ಕಳಿಸದೆ ಉಳಿದಿದ್ದೀಯ? ಅಥವಾ ನನ್ನನ್ನು ಮರೆತೇ ಬಿಟ್ಟೆಯಾ?

ಪಾಚು,
ನಿನಗೆ ನೆನಪಿದೆಯಾ, ನಾವಿಬ್ಬರೂ ಕೂಡಿ ಓಡಾಡಿದ ಜಾಗ, ತಿಂದ ತಿನಿಸು, ಆಡಿದ ಮಾತು, ಒಬ್ಬರಿಗೊಬ್ಬರು ಕಾದು ನಿಂತ ಘಳಿಗೆ ಎಲ್ಲವೂ ಕನಸೇನೋ ಎನಿಸ ಹತ್ತಿದೆ. ನನಗಾಗಿ ನೀನು, ನಿನಗಾಗಿ ನಾನು ಆ ಬ್ರಹ್ಮ ಬರೆದಾಯಿತು ಎಂದು ಹಾಡನ್ನು ಗುನುಗುತ್ತಲೇ ನಿನ್ನನ್ನು ಕಾತರದಿಂದ ಕಾಣಲು ಬರುತ್ತಿದ್ದೆ. ನಿನಗಾದರೂ ಅಷ್ಟೇ, ಕಣ್ಣಲ್ಲಿ ಕಾತರ, ಮನದಲ್ಲಿ ತವಕ ಇರುತ್ತಿತ್ತಾದರೂ ಏನೊಂದೂ ಇರದಂತೆ ತೋರಿಸಿ ಕೊಳ್ಳಲು ಎಚ್ಚರ ವಹಿಸುತಿದ್ದೆ. ಅದೊಂದು ದಿನ ಪಾರ್ಕ್‌ನಲ್ಲಿ ಜೊತೆಗೂಡಿ ಹೊರಟಾಗ ಮೆಲ್ಲನೆ ನೀನು ನನ್ನ ಕೈ ಹಿಡಿದುಕೊಂಡೆ. ನನಗೆ ಅದು ಅನಿರೀಕ್ಷಿತವಾಗಿತ್ತು. ಕೈ ಬಿಡಿಸಿಕೊಳ್ಳಲು ನೋಡಿದೆ. ನಿನ್ನ ಬಲವಂತದ ಹಿಡಿತದ ಮುಂದೆ ನಾನು ಸುಮ್ಮನಾಗಬೇಕಾಯಿತು. “ಯಾಕೆ, ಕೈ ಹಿಡೀಬಾರದಿತ್ತಾ?’ ನಿನ್ನ ಪ್ರಶ್ನೆಗೆ ಯಾರಾದ್ರೂ ನೋಡಿದ್ರೆ… ಎಂದು ಭಯದಿಂದಲೇ ಹೇಳಿದ್ದೆ. ಆ ಮಾತು ಕೇಳಿ-ಗಂಡಸಾಗಿ ಹುಟ್ಟಿ ಹೆದರಿಕೋತಿಯಲ್ಲೋ ಎಂದು ಹೇಳಿದವಳೇ ಪಕಪಕನೇ ನಕ್ಕಿದ್ದೆ. ಆ ನಗುವನ್ನು, ನನಗೇಕೋ ಇನ್ನೂ ಮರೆಯಲು ಸಾಧ್ಯವಾಗಿಲ್ಲ.

ಸಿನಿಮಾಕ್ಕೆಂದು ಹೋದಾಗ ಇಬ್ಬರೂ ಮೈಗೆ ಮೈ ಅಂಟಿಸಿಕೊಂಡು ಕೂತಾಗಲೂ ಅಷ್ಟೇ. ಹಿಂದು ಮುಂದು ಎನೂ ನೋಡದೇ ನೀನೊಬ್ಬಳೇ ಜೋರಾಗಿ ಮಾತನಾಡುತಿದ್ದೆ. ನಿನ್ನೊಂದಿಗೆ ಅನೇಕ ಬಾರಿ ಒಂಟಿಯಾಗಿ ಸಿಕ್ಕಿದ್ದೇನೆ. ಎಂದೂ ಸಭ್ಯತೆಯ ಗೆರೆಯನ್ನು ಮೀರಲಿಲ್ಲ. ಐ ಲವ್‌ ಯೂ ಕಣೋ ಎಂದು ಹೃದಯ ತುಂಬಿ ಹೇಳಿದಾಗ ನನಗೊಂದು ಧನ್ಯತಾಭಾವ.

ಆದರೆ, ಈಗ ರಜೆಗೆಂದು ಊರಿಗೆ ಹೋದವಳು ನನ್ನನ್ನು ಮರೆತೆಯಾ? ನೀನು ಆಡಿದ ಮಾತುಗಳನ್ನೆ ಮರೆತೆಯಾ? ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದೆಯಾ? ಅಪ್ಪ -ಅಮ್ಮನ ಕಟ್ಟಳೆಯಲ್ಲಿರುವ ಕಾರಣದಿಂದ ಫೋನ್‌ ಮಾಡದೆ, ಮೆಸೇಜ್‌ ಕಳಿಸದೆ ಉಳಿದಿದ್ದೀಯ? ಅಥವಾ ನನ್ನನ್ನು ಮರೆತೇ ಬಿಟ್ಟೆಯಾ? ಅಂತಹದ್ದೊಂದು ಸಂಶಯ ಮೂಡಿ ಬೇಡವೆಂದರೂ ಮನಸು ಅಳತೊಡಗಿದೆ. ನಿನ್ನ ಫೋನ್‌ ಯಾವಾಗಲೂ ಸ್ವಿಚ್‌ ಆಫ್. ಅಪರೂಪಕ್ಕೆ ಚಾಲೂ ಇದ್ದರೂ ಕರೆ ಸ್ವೀಕಾರ ಮಾಡುತ್ತಿಲ್ಲ. ನಿನ್ನ ಒಂದು ಕರೆಗಾಗಿ, ಪ್ರೀತಿಯ ಮಾತಿಗಾಗಿ, ಮಧುರ ಧ್ವನಿಗಾಗಿ ಕಾತರದಿಂದ ಕಾಯುತಿದ್ದೇನೆ.

ದಯವಿಟ್ಟು ಕರೆ ಸ್ವೀಕರಿಸಿ, ಮನದ ಭಾರ ಇಳಿಸಲಾರೆಯಾ? ಪ್ಲೀಸ್‌!

ಭೋಜರಾಜ ಸೊಪ್ಪಿಮಠ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.