ತಿಂಗಳ ಕೂಟದಲ್ಲಿ ಕೋಳ್ಯೂರು ಅರ್ಥ ವೈಖರಿ


Team Udayavani, Aug 23, 2019, 5:00 AM IST

4

ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಪ್ರಸಿದ್ಧರೆಂಬುದು ಸರ್ವವೇದ್ಯ. ಪ್ರಸ್ತುತ ಅವರ ವಯಸ್ಸು ಎಂಬತ್ತೇಳು ಮೀರಿದೆ. ಇತ್ತೀಚೆಗೆ ರಂಗಪ್ರಪಂಚದ ಪ್ರದರ್ಶನಕ್ಕೆ ವಿರಳವೆನಿಸಿದವರು. ವಯೋಸಹಜವಾಗಿ ಅಲ್ಪಪ್ರಮಾಣದ ಮರೆವಿನ ಭಾದೆ ಆವರಿಸಿದೆ. ಹೊರತಾಗಿ ಇಂದಿಗೂ ಜೀವನೋತ್ಸಾಹವನ್ನು ಉಳಿಸಿಕೊಂಡವರು. ಅಂದಿನ ತಿಂಗಳ ತಾಳಮದ್ದಳೆ “ಶ್ರೀರಾಮ ಪಟ್ಟಾಭಿಷೇಕ’ ಕಥಾ ಭಾಗದ ಕೈಕೇಯಿ ಪಾತ್ರ ಅವರಿಂದ ಸೊಗಸಾಗಿ ಚಿತ್ರಿತವಾಯಿತು.

ಕೋಳ್ಯೂರರ ಅರ್ಥಗಾರಿಕೆಯಲ್ಲಿ ಪ್ರಸಂಗಕ್ಕೆ ಒಗ್ಗದ‌, ಅಗ್ಗದ ಸಂಗತಿಗಳ ಸುಳಿವಿರದು. ಕಾವ್ಯಸ್ವಾರಸ್ಯ ಹೊಂದಿದ ಪದಪ್ರಯೋಗ. ಸರಳವಾಗಿ ಸಾಗುವ ವಾಕ್ಯಸರ‌ಣಿ. ಸಾಂದರ್ಭಿಕ ರಸಸಿದ್ಧಾಂತ ಪ್ರತಿಪಾದನೆ. ಆಡುವ ನುಡಿಯ ಆಯ ಕೆಡದಂತೆ ಕಾಯ್ದುಕೊಳ್ಳುವ ಕಡು ಕಾಳಜಿ. ಭಾಗವತರು ಹೇಳುವ ಹಾಡಿಗೆ ಧ್ವನಿ ಕೂಡಿಸುವುದು. ಹೂಂಕಾರ, ಉದ್ಗಾರ, ನಗು, ಸಿಡುಕು ಎಲ್ಲವೂ ಅರ್ಥಪೂರ್ಣ. ತಾನೇ ಸ್ವತಃ ಪಾತ್ರವಾಗಿ, ಅದರೊಳಗೆ ಇಳಿದು ಬದುಕುವ ಭಾವಾಭಿವ್ಯಕ್ತಿಯ ಪರಿ. ಅಲ್ಲದೆ ಅದೇ ಸ್ತ್ರೀ ಸಹಜವೆನಿಸುವ ತಾರುಣ್ಯದ ಕಂಠ ಸಿರಿ. ಅದೆಲ್ಲವೂ ಅವರ ಈ ವೃದ್ಧಾಪ್ಯದಲ್ಲೂ ಸೊರಗದೆ ಸರಿಯಾಗಿದೆ.

“ನಾಳೆ ರಾಮಚಂದ್ರನಿಗೆ ಪಟ್ಟಾಭಿಷೇಕವಂತೆ…’ ವರ್ತಮಾನ ಕೇಳಿದ ತಕ್ಷಣ ಸಂತೋಷವನ್ನು ವ್ಯಕ್ತಪಡಿಸುವುದು ಕೈಕೆಯಿ ಪಾತ್ರದ ಸ್ವಭಾವ. ಮಂಥರೆಯ ತಿರುಮಂತ್ರದ ಬಳಿಕ ಆ ಭಾವನೆ ಪರಿವರ್ತನೆಗೊಳ್ಳುವುದು. ಇದು ಆ ಪ್ರಸಂಗದ ನಡೆ ಮತ್ತು ಮಹತ್ವದ ತಿರುವು. ಆ ಸನ್ನಿವೇಶಕ್ಕೆ ಅನುಗುಣವಾಗಿ ಕೋಳ್ಯೂರರ ಭಾವಪ್ರಕಟಣೆ ಮತ್ತು ಅರ್ಥ ವಿಸ್ತಾರದ ವೈಖರಿ ಅನನ್ಯವಾದುದು.

ದಶರಥ ಪ್ರಲಾಪ ಸಂದರ್ಭದಲ್ಲಿ “ಕೈತಟ್ಟಿ ಕೊರಳು ಮುಟ್ಟಿ…ನನ್ನ ಭರತನಿಗೆ ಪಟ್ಟಕಟ್ಟಿ ರಾಮನನ್ನು ಅಡವಿಗೆ ಅಟ್ಟಿ. ನಿಮ್ಮ ಸಾವಿರ ಮಾತು ಬೇಡ. ಆಗುವುದಿಲ್ಲವೆಂದು ಒಮ್ಮೆ ಹೇಳಿ ಬಿಟ್ಟು ಬಿಡಿ, ನನಗೆ ಅಷ್ಟು ಸಾಕು…’ ಕರ್ಣಕಠೊರವಾದ ನುಡಿ ಕ್ರೋಧಾವೇಶದ ಪ್ರತಿಧ್ವನಿಯಾಗಿ ಕೇಳುಗರ‌ ಮನಮುಟ್ಟಿತು. ಪ್ರಸಂಗದ ಉಪಕ್ರಮದಿಂದ ಉಪಸಂಹಾರದವರೆಗೆ ಎಲ್ಲವೂ ಅಚ್ಚುಕಟ್ಟು.

ಯಕ್ಷದೇವ ಬಳಗದ ಸಂಯೋಜಕ ದೇವಾನಂದ ಭಟ್ಟರು ಮತ್ತು ಹತ್ತಾರು ಹವ್ಯಾಸಿ ಕಲಾವಿದರು ಅಂದಿನ ಪ್ರಸಂಗದ ಹಿಮ್ಮೇಳ ಹಾಗೂ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡರು.

– ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ

ಟಾಪ್ ನ್ಯೂಸ್

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

Rabkavi-Banhatti; ರೋಹಿಣಿ ಮಳೆ ಒಲಿದರೆ ರೈತನ ಬಾಳೇ ಬಂಗಾರ

1-qweewqe

Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-wqewewqe

Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ

1-wqewqeqw

Pune; ಖ್ಯಾತ ಬಿಲ್ಡರ್ ಒಬ್ಬರ 17 ವರ್ಷದ ಪುತ್ರನ ಪೋರ್ಷೆ ಕಾರಿಗೆ ಇಬ್ಬರು ಬಲಿ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.