ಅರ್ಜೆಂಟಲ್ಲಿ ಪರೀಕ್ಷೆ ಬರೆದು ರ್‍ಯಾಂಕ್‌ ಬಂದೆ


Team Udayavani, Apr 7, 2020, 5:00 PM IST

ಅರ್ಜೆಂಟಲ್ಲಿ ಪರೀಕ್ಷೆ ಬರೆದು ರ್‍ಯಾಂಕ್‌ ಬಂದೆ

ಏಳನೇ ತರಗತಿಯಲ್ಲಿರುವಾಗ, ನಾನು ಒಂದು ತಿಂಗಳು ಶಾಲೆಗೆ ಹೋಗಿರಲಿಲ್ಲ. ಅದಕ್ಕೆ ಕಾರಣ ಏನು ಅನ್ನೋದು ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಆದರೆ, ಒಂದು ತಿಂಗಳ ನಂತರ ಶಾಲೆಗೆ ಹೋದಾಗ ನನಗೆ ಒಂದು ಶಾಕ್‌ ಕಾದಿತ್ತು. ಅದೇನೆಂದರೆ, ಅಂದು ನಾನು ಚಿಂತನ- ವಿಜ್ಞಾನ ಎಂಬ ಪರೀಕ್ಷೆ ಬರೆಯಬೇಕಿತ್ತು.

ಸಹಪಾಠಿಗಳು ಹೇಳಿದಾಗಲೇ ನನಗೆ ಈ ವಿಷಯ ಗೊತ್ತಾಗಿದ್ದು. ಆದರೆ, ನಾನು ಆ ಪರೀಕ್ಷೆಯನ್ನು ಕಟ್ಟಿರಲಿಲ್ಲ. ಹಾಗಾಗಿ, ಅವರ ಮಾತನ್ನು ಹಗುರವಾಗಿ ಪರಿಗಣಿಸಿ ಸುಮ್ಮನೇ ಕೂತಿದ್ದೆ. ನಮ್ಮ ಟೀಚರ್‌ ಬಂದವರೇ- “ಪರೀಕ್ಷೆಗೆ ರೆಡಿ ತಾನೇ’ ಅಂದರು. ನಾನು ಗಾಬರಿಯಿಂದ, “ಯಾವ ಪರೀಕ್ಷೆ?’ ಎಂದು ಕೇಳಿದೆ. ನನಗೆ ವಿಷಯ ತಿಳಿದಿಲ್ಲ ಎಂದು ಅವರಿಗೆ ಗೊತ್ತಾಗಿದ್ದೇ ತಡ, ಎಲ್ಲವನ್ನೂ ವಿವರಿಸಿದರು. ನಂತರ- “ನೋಡೂ, ನಿನ್ನ ಮೇಲೆ ಬಹಳ ನಂಬಿಕೆ ಇಟ್ಟು, ನಮ್ಮ ಶಾಲೆಗೆ ಕೀರ್ತಿ ತರುತ್ತೀಯ ಎನ್ನುವ ನಿರೀಕ್ಷೆಯಲ್ಲಿ ನೀನು ಶಾಲೆಗೆ ಬಾರದೇ ಇದ್ದರೂ, ನಿನ್ನ ಹೆಸರಲ್ಲಿ ಫೀ ತುಂಬಿದ್ದೇನೆ. ಇವತ್ತೇ ಆ ಪರೀಕ್ಷೆ’ ಎಂದರು.

ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. “ಬಾ’ ಎಂದು ಕರೆದ ಟೀಚರ್‌, ನಿಗದಿಪಡಿಸಿದ ಸ್ಥಳದಲ್ಲಿ ಕೂಡಿಸಿ, ಪ್ರಶ್ನೆ ಪತ್ರಿಕೆ ಕೊಟ್ಟರು. ನನಗೆ ಪ್ರಶ್ನೆಪತ್ರಿಕೆಗಿಂತ, ಟೀಚರ್‌ ನನ್ನ ಮೇಲಿಟ್ಟಿರೋ ನಂಬಿಕೆಯೇ ಹೆಚ್ಚಾಗಿ ಭಯಪಡಿಸಿಬಿಟ್ಟಿತ್ತು. ಹಾಗೋ- ಹೀಗೋ ಪರೀಕ್ಷೆ ಬರೆದು ನಿಟ್ಟುಸಿರು ಬಿಟ್ಟೆ.

ಒಂದಷ್ಟು ವಾರಗಳ ನಂತರ ಫ‌ಲಿತಾಂಶ ಬಂತು. ಅದರಲ್ಲಿ, ಯಾವ ಯಾವ ಶಾಲೆಯ ಮಕ್ಕಳು ಯಾವ ಸ್ಥಾನ ಪಡೆದುಕೊಂಡಿದ್ದಾರೆ ಎನ್ನುವ ವಿವರವಿತ್ತು. ನಮ್ಮ ಟೀಚರ್‌ ಅದನ್ನು ಹಿಡಿದುಕೊಂಡು, ಫ‌ಲಿತಾಂಶ ಹೇಳುತ್ತಾ ಬಂದರು. ನಮ್ಮ ಶಾಲೆಯ ರಿಸಲ್ಟ್ ಹೇಳ್ಳೋ ಹೊತ್ತಿಗೆ ಎದೆ ಬಡಿತ ಜಾಸ್ತಿ ಆಗಿತ್ತು. ನನ್ನ ಸಹಪಾಠಿ ಸಿಂದಗಿ ತಾಲೂಕಿಗೆ ನಾಲ್ಕನೇ ಶ್ರೇಣಿ ಬಂದ ವಿಷಯ ತಿಳಿಸಿದರು. ನಂತರ ಸ್ವಲ್ಪ ಹೊತ್ತು ಸತಾಯಿಸಿದ ಟೀಚರ್‌, ನಾನು ರಾಜ್ಯಕ್ಕೆ ಎರಡನೇ ಸ್ಥಾನ ಬಂದಿರುವುದನ್ನು ಅನೌನ್ಸ್ ಮಾಡಿದರು. ಸಂತೋಷ ತಡೆಯಲಾಗದೇ ಮನೆಗೆ ಬಂದವಳೆ, ಮನೆಯವರ ಮುಂದೆ ನಡೆದ ಎಲ್ಲಾ ವಿಷಯ ತಿಳಿಸಿದೆ. ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ನನ್ನ ಹೆಸರಲ್ಲಿ ಅರ್ಜಿ ತುಂಬಿ ಒಂದು ಪರೀಕ್ಷೆಯಲ್ಲಿ ಶ್ರೇಣಿ ಪಡೆಯಲು ಕಾರಣರಾದ ಆ ಟೀಚರ್‌ಗೊಂದು ಸಲಾಂ.

 

-ಪ್ರೀತಿ ನಾಗನಗೌಡ ಪಾಟೀಲ, ಸಿಂದಗಿ

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.