ಚಿರಕಾಲ ಉಳಿಯಲಿ ಈ ಪ್ರೇಮ…


Team Udayavani, Feb 25, 2020, 5:00 AM IST

majji-12

ಪ್ರೀತಿಯೆಂಬುದು ಮಾಯೆ, ಕಾಲಹರಣಕ್ಕಾಗಿ ಪ್ರೀತಿ ಮಾಡುತ್ತಾರೆ ಎಂಬ ಮಾತುಗಳ ಮೇಲೆ ನಾನು ನಂಬಿಕೆ ಇಟ್ಟಿದ್ದಾಗಲೇ ನಿನ್ನ ಪರಿಚಯವಾಯಿತು. ಆ ಮಾತುಗಳನ್ನೆಲ್ಲ ಸುಳ್ಳು ಮಾಡಿ, ನನ್ನ ಪ್ರತಿಯೊಂದು ಕನಸಿಗೂ ಹೆಗಲಾಗಿ ನಿಂತು, ಪ್ರತಿ ನೋವು ನಲಿವಿನಲ್ಲೂ ಜೊತೆಗಿದ್ದವನು ನೀನು. ನಮ್ಮದು ಆಕಸ್ಮಿಕವಾಗಿ ಹುಟ್ಟಿದ ಪ್ರೇಮ. ಪರಿಚಯ ಮೊದಲೆ ಇದ್ದರೂ ಸಂಪರ್ಕಿಸಲು ಸಹಾಯವಾದದ್ದು ಇನ್‌ಸ್ಟಾಗ್ರಾಮ್‌. ನಿನ್ನ ಕಾಳಜಿ ತುಂಬಿದ ಮಾತುಗಳು, ಕೋಪದಲ್ಲೂ ಮುಗªತೆ ತುಂಬಿರುವ ನಿನ್ನ ಮುಖ, ಸಾವಿರ ಭಾವನೆಗಳನ್ನು ತುಂಬಿರುವ ನಿನ್ನ ಕಣ್ಣುಗಳು, ದುಡಿದು ತಿನ್ನಬೇಕು ಎಂಬ ನಿಷ್ಠುರ ಮಾತು ಕಷ್ಟಕ್ಕೆ ಆಗುವ ಒಳ್ಳೆಯ ಮನಸ್ಸು… ಇವೆಲ್ಲಾ ಸೇರಿ, ಸ್ನೇಹವನ್ನು ಪ್ರೀತಿಯ ಕಡೆ ತಿರುಗಿಸಿತು.

ಜೀವನದ ಎಲ್ಲ ನೋವಿಗೂ ಆಪ್ತಸ್ನೇಹಿತನಂತೆ ಸಾಂತ್ವನ ನೀಡಿ ಸಮಾಧಾನಿಸುವವನು ನೀನು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವವನೂ ನೀನು. ಪ್ರೀತಿ ಅಂದ ಮೇಲೆ ಇದೆಲ್ಲ ಸಹಜ ಅಲ್ವಾ? ಮೊದ ಮೊದಲು ನನಗೆ ನಿನ್ನ ಮೇಲೆ ಕಾಳಚಿ ಇತ್ತೇ ಹೊರತು ಯಾವುದೇ ಭಾವನೆಗಳು ಇರಲಿಲ್ಲ. ದಿನ ಕಳೆದಂತೆ ಪ್ರೀತಿಯ ಬೀಜ ಮೊಳಕೆಯೊಡೆದು ನಿನ್ನ ಸಂದೇಶಕ್ಕಾಗಿ ಕಾಯುವಷ್ಟರ ಮಟ್ಟಿಗೆ ನನ್ನ ಮನಸ್ಸು ಬದಲಾಗಿತ್ತು ಕಣೋ.

ಪ್ರತಿಯೊಂದು ಹೆಣ್ಣು ಮಕ್ಕಳಿಗೂ ನನ್ನಂತೆ ನನ್ನ ತಂದೆ-ತಾಯಿಯನ್ನು ಗೌರವಿಸುವ ಹುಡುಗ ಸಿಗಬೇಕೆಂಬುದು ಕನಸಾಗಿರುತ್ತದೆ. ಯಾವ ಜನ್ಮದ ಪುಣ್ಯವೋ ನಾ ಕಾಣೆ. ನನ್ನ ಜೀವನದಲ್ಲಿ ನನಗಿಂತ ಹೆಚ್ಚಾಗಿ ತಂದೆ ತಾಯಿಯನ್ನು ಪ್ರೀತಿಸುವ ನೀನು ಸಿಕ್ಕೆ. ಜೀವನದ ಕೊನೆಯವರೆಗೂ ನಿನ್ನ ಜೊತೆಯಾಗಿರಬೇಕು. ಎಂಬುದೇ ನನ್ನ ಆಸೆ.

ಶೈಲ ಶ್ರೀ ಬಾಯಾರ್‌

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.