ನೀನು ತೋರಿದ ಕಾಳಜಿ, ಪ್ರೀತಿಗೆ ಧನ್ಯವಾದ


Team Udayavani, Nov 26, 2019, 1:59 AM IST

Josh–Letter

ನನ್ನ ಬಾಳಿಗೆ ಮುಂಜಾವಿನ ಸೂರ್ಯನ ಕಿರಣಗಳಂತೆ ಬಂದವನು ನೀನು. ಒಂಟಿತನಕ್ಕೆ ಪೂರ್ಣವಿರಾಮವಿಡುವ ಸಮಯ ಬಂದಿತೆಂದು ಸಂತಸಪಟ್ಟಿದ್ದೆ, ಆದರೆ ಈಗ, ಅದೇ ಒಂಟಿತನದ ಬದುಕು ನನ್ನನ್ನು ಮತ್ತೆ ಕರೆಸಿಕೊಂಡಿದೆ.

ನೀ ಜೊತೆಯಲ್ಲಿ ಇದ್ದರೆ ಜಗತ್ತನ್ನೇ ಎದರಿಸಬಲ್ಲೆ ಎನ್ನುವ ಮೊಂಡು ಧೈರ್ಯ, ಪ್ರತಿಸಲ ನನ್ನೊಂದಿಗೆ ನನ್ನವನಾಗಿ ಇದ್ದು ಬದುಕದಾರಿಯಲ್ಲಿ ಜೊತೆಯಾಗುವೆ ಎಂಬ ದೃಢ ನಂಬಿಕೆ ನಿನ್ನನ್ನು ಹಿಂದು, ಮುಂದು ನೋಡದೆ ನಂಬುವಂತೆ ಮಾಡಿತ್ತು. ಆದರೆ, ಅದೇಕೆ ನಿನ್ನನ್ನು ಅಷ್ಟೊಂದು ನಂಬಿದ್ದೆ ಎಂದು ನನಗೂ ಗೊತ್ತಿಲ್ಲ. ನೀನು ನನ್ನಿಂದ ಮರೆಯಗಬಹುದು ಎಂಬ ಸಣ್ಣ ಕಲ್ಪನೆ ಕೂಡ ಇರಲಿಲ್ಲ, ಎಂದಾದರೊಮ್ಮೆ, ನೀನು ನನ್ನಿಂದ ದೂರವಾಗಬಹುದೆಂದು ಕನಸಲ್ಲೂ ಊಹಿಸಿರಲಿಲ್ಲ. ಆದರೆ, ನೀನು ಕಾರಣವಲ್ಲದ ಕಾರಣ ಹೇಳಿ ಬಿಟ್ಟುಹೋದೆ. ಅದಕ್ಕೆ ನನ್ನದೇನು ಆಕ್ಷೇಪವಿಲ್ಲ. ಸಂಬಂಧಗಳು ಬೇಡವಾದಾಗ ಹುಲ್ಲು ಕಡ್ಡಿ ತಾಗಿದರೂ, ಕೂಡ ಅದೂ ಒಂದು ಸ್ಪಷ್ಟ ಕಾರಣವೇ ಆಗಿ ದೂರವಾಗಲು ಕಾರಣವಾಗಬಹುದು.

ಆದರೆ, ನೀನು ಕೇವಲ ನಿನ್ನ ಹೇಳಿಕೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ದೂರವಾಗಿದ್ದು ಮನಸಿನ್ನು ಘಾಸಿಗೊಳಿಸಿದೆ. ಒಂದು ದಿನವಾದರೂ ನನಗೆ ನನ್ನದೇ ಆದ ಕುಟುಂಬವಿದೆ, ಅವರಿಗೂ ನನ್ನ ಅವಶ್ಯಕತೆ ಇದೆ ಎಂದು ನೀನು ಯೋಚಿಸಿದ್ದರೆ ಇಂದು ನಾವಿರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಪ್ರತಿದಿನ ನಿನ್ನ ಇಷ್ಟದಂತೆಯೇ ನಡೆದುಕೊಳ್ಳುತ್ತಿದ್ದ ನಾನು, ಒಂದು ದಿನವಷ್ಟೇ ನಿನಗೆ ಎದುರಾಡಿದ್ದಕ್ಕೆ ನಿನ್ನಿಂದ ದೂರ ಆಗಿಬಿಟ್ಟೆಯಲ್ಲ; ಅದು ಎಷ್ಟು ಸರಿ?

ನಿನ್ನೊಂದಿಗಿನ ನೆನಪುಗಳು ಪ್ರತಿನಿಮಿಷ ನನ್ನನ್ನು ಚುಚ್ಚಿ ಸಾಯುವಂತೆ ಮಾಡುತ್ತಿವೆ. ನೀ ಬಿಟ್ಟು ಹೋದ ಜಾಗ ಇಂದಿಗೂ ನಮ್ಮಿಬ್ಬರ ಒಂದಾಗುವಿಕೆಗೆ ಕಾಯುತ್ತಿದೆ. ಆ ಜಾಗಕ್ಕೆ ಹೋದಾಗ ಸುತ್ತಲಿನ ಪರಿಸರ ನಿಮ್ಮ ಕೋಳಿಜಗಳವನ್ನು ಸರಿಪಡಿಸಿಕೊಂಡು ಒಂದಾಗಬಾರದೇ ಎಂದು ಪಶ್ನಿಸುತ್ತಿದ್ದಂತೆ ಭಾಸವಾಗುತ್ತದೆ. ಅದಕ್ಕೆ ಏನೆಂದು ಉತ್ತರಿಸಲಿ?

ಒಂಟಿಯಾಗಿ ಸಾಗುವುದೇನೂ ನನಗೆ ಹೊಸತಲ್ಲ. ಆದರೆ, ಇಷ್ಟು ದಿನ ನಿನಗೆ ಹೊದಿಕೊಂಡಿದ್ದ ಮನಸ್ಸು ಇಂದು ಅಳುತ್ತಿದೆ. ನಿನ್ನ ಹಳೇ ಬದುಕಿನ ದಾರಿಗೆ ಮತ್ತೆ ಹೊರಟೆಯಲ್ಲಾ ಎಂದು. ಎಷ್ಟೆಂದು ಸಂತೈಸಲಿ ನಾನಾದರೂ? ಅದೂ ಕೂಡ ನಿನ್ನಂತಯೇ ನನ್ನ ಮಾತು ಕೇಳುತ್ತಿಲ್ಲ.

ಸಂಬಂಧಗಳಲ್ಲಿ ನಂಬಿಕೆ ಕಳೆದುಕೊಂಡು ಬದುಕುತ್ತಿದ್ದ ನನ್ನ ಬಾಳಿಗೆ ಮುಂಜಾವಿನ ಸೂರ್ಯನ ಕಿರಣಗಳಂತೆ ಬಂದವನು ನೀನು. ಒಂಟಿತನಕ್ಕೆ ಪೂರ್ಣವಿರಾಮವಿಡುವ ಸಮಯ ಬಂದಿತೆಂದು ಸಂತಸಪಟ್ಟಿದ್ದೆ, ಆದರೆ ಈಗ, ಅದೇ ಒಂಟಿತನದ ಬದುಕು ನನ್ನನ್ನು ಮತ್ತೆ ಕರೆಸಿಕೊಂಡಿದೆ. ನನ್ನೊಂದಿಗೆ ಇರುವಷ್ಟು ದಿನ ನೀಡಿದ ಪ್ರೀತಿ, ಕಾಳಜಿ ಇವೆಲ್ಲದಕ್ಕೂ ನನ್ನ ಮನಃಪೂರ್ವಕ ಧನ್ಯವಾದ.

– ಪವಿತ್ರಾ ಭಟ್‌

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.